Kannada NewsKarnataka NewsPolitics

*ಗೃಹ ಲಕ್ಷ್ಮೀ ಹಣದಿಂದ ಮನೆಗೆ ಹೊಸ ಬಾಗಿಲು: ಬಾಗಿಲಿನ ಮೇಲೆ ಸಿದ್ದರಾಮ್ಯನವರ ಫೋಟೋ ಕೆತ್ತಿಸಿದ ದಂಪತಿ*

ಪ್ರಗತಿವಾಹಿನಿ ಸುದ್ದಿ: ಗೃಹ ಲಕ್ಷ್ಮೀ ಹಣವನ್ನು ಕೂಡಿಟ್ಟು ದಂಪತಿ ಸಾರ್ಥಕ ಕೆಲಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೇಲಿನ ಕೃತಜ್ಞತೆ ಮತ್ತು ಪ್ರೀತಿಯನ್ನು ತಮ್ಮ ಮನೆಯ ಮುಖ್ಯ ಬಾಗಿಲಿನ ಮೇಲೆ ಅವರ ಹೆಸರು ಹಾಗೂ ಭಾವಚಿತ್ರ ಕೆತ್ತಿಸಿದ್ದಾರೆ. 

ವಿಜಯನಗರದ ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿಗಳಾದ ಕೆ.ಎಂ ತಿಪ್ಪೇಸ್ವಾಮಿ ಹಾಗೂ ಪಾರ್ವತಮ್ಮ ದಂಪತಿಯ ಮನೆಯ ಮುಖ್ಯದ್ವಾರದ ಬಾಗಿಲು ದುರಸ್ತಿ ಅವಸ್ಥೆ ತಲುಪಿತ್ತು. ಆರ್ಥಿಕ ಸಂಕಷ್ಟದಿಂದ ಹೊಸ ಬಾಗಿಲು ಹಾಕಿಸೋಕೆ ಆಗಿರಲಿಲ್ಲ. ಪಾರ್ವತಮ್ಮ 15ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಇದೀಗ ಹೊಸ ಬಾಗಿಲು ಮಾಡಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೆತ್ತಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ದಂಪತಿ ಹೊಸ ಬಾಗಿಲಿಗೆ ಸಿಎಂ ಭಾವಚಿತ್ರ ಕೆತ್ತಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯ ದಂಪತಿ ಫೋಟೊ ಎಲ್ಲಡೆ ವೈರೈಲ್ ಆಗುತ್ತಿದೆ.

Home add -Advt

Related Articles

Back to top button