
ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷ ಸಂಭ್ರಮಿಸಲು ಪ್ರವಾಸಿ ತಣಗಳಿಗೆ, ರಾಜ್ಯದ ದೇವಾಲಗಳಿಗೆ ಜನ ಸಾಗರೇ ಹರಿದುಬರುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಕೆಲ ಪ್ರವಸಿ ತಾಣಗಳಿಗೆ ನಿರ್ಬಂಧ ಹೇರಿದೆ.
ನಂದಿಬೆಟ್ಟ, ಚಾಮುಮ್ಡಿ ಬೆಟ್ಟ, ಕೆ.ಆರ್.ಎಸ್ ಹಿನ್ನೀರು ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕೆಲ ರೆಸಾರ್ಟ್, ಹೋಂ ಸ್ಟೇಗಳಲ್ಲಿ ಡಿಜೆ ಹಾಗೂ ಸ್ಪೀಕರ್ ಬಳಕೆಗಳನ್ನು ನಿಷೇಧಿಸಲಾಗಿದೆ.
ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಡಿ.31ರ ಬೆಳಿಗ್ಗೆ 6 ಗಂತೆಯಿಂದ ಜನವರಿ 1 ಸಂಜೆ 7 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಇಂದು ಸಂಜೆ 7 ಗಂಟೆ ಬಳಿಕ ಜನವರಿ 1 ರ ಬೆಳಗಿನ ವರೆಗೆ ನಿರ್ಬಂಧ ಹೇರಲಾಗಿದೆ. ಕೆ.ಆರ್.ಎಸ್ ಹಿನ್ನೀರು, ಬಲಮುರಿ, ಎಡಮುರಿ, ಕಾವೇರಿ ನದಿ ತೀರ ಪ್ರದೇಶಗಳಿಗೆ ಜನವರಿ 1ರ ರಾತ್ರಿವರೆಗೂ ನಿಷೇಧವಿರಲಿದೆ.
ಮಳವಳ್ಳಿ ತಾಲೂಕಿನ ಮುತ್ತುತ್ತಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.