Karnataka NewsLatest

*ಹೆರಿಗೆಯಾದ ಎರಡೇ ದಿನಕ್ಕೆ ನವಜಾತ ಹೆಣ್ಣುಶಿಶು ಮಾರಾಟ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನವಜಾತ ಶಿಶುಗಳ ಮಾರಾಟ ಪ್ರಕರಣ ಮತ್ತೆ ಮುಂದುವರೆದಿದೆ. ಹೆರಿಗೆಯಾದ ಎರಡೇ ದಿನಕ್ಕೆ ನವಜಾತ ಹೆಣ್ಣುಶಿಹುವನ್ನು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೊಪ್ಪದಲ್ಲಿ ಈ ಘಟನೆ ನಡೆದಿದೆ. 5 ಲಕ್ಷ ಅಡ್ವಾನ್ಸ್ ಪಡೆದು 1 ಲಕ್ಷ ರೂಪಾಯಿಗೆ ಎರಡು ದಿನದ ಹೆಣ್ಣು ಶಿಶುವನ್ನು ಮಾರಾಟ ಮಾಡಲಾಗಿದೆ.

ನಿವೃತ್ತ ನರ್ಸ್ ಓರ್ವರ ಸಹೋದರ ಕಾರ್ಕಳ ಮೂಲದ ರಾಘವೇಂದ್ರ ಎಂಬುವವರಿಗೆ ಮಗು ಮಾರಾಟ ಮಡಲಾಗಿದೆ. ವಿಷಯ ತಿಳಿಯುತ್ತಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಮಗುವಿನ ತಂದೆ-ತಾಯಿ ಹಾಗೂ ನರ್ಸ್ ನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Home add -Advt

Related Articles

Back to top button