Latest

*ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದು ಬಂದಿದ್ದ ಕಳಸ ಮೂಲದ ಯಾತ್ರಾರ್ಥಿ ಹೃದಯಾಘಾತದಿಂದ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಜೂನ್ 2ರಂದು ಓಡಿಶಾದಲ್ಲಿ ಸಂಭವಿಸಿದ್ದ ತ್ರಿವಳಿ ರೈಲು ದುರಂತದಲ್ಲಿ ಬದುಕುಳಿದಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಯಾತ್ರಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಧರ್ಮಪಾಲಯ್ಯ (61) ಮೃತರು. ಕಳಸ ಮೂಲದ 110 ಜನರು ಜೈನ ಯಾತ್ರಾಸ್ಥಳ ಜಾರ್ಖಂಡ್ ನ ಸುಮೇದ್ ಶಿಖರ್ಜಿಗೆ ತೆರಳಿದ್ದರು. ಅವರು ತೆರಳಿದ್ದ ರೈಲು ಓಡಿಶಾ ಬಳಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಬಚಾವ್ ಆಗಿದ್ದ ಯಾತ್ರಿಕರು ಯಾತ್ರಾಸ್ಥಳಗಳತ್ತ ಪ್ರಯಾಣ ಮುಂದುವರೆಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕಳಸದ ಧರ್ಮಪಾಲಯ್ಯ ಕೂಡ ಶಿಖರ್ಜಿಗೆ ತೆರಳಿ ವಾಪಸ್ ಆಗುತ್ತಿದ್ದರು. ಈ ವೇಳೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಸುಮೇದ್ ಶಿರ್ಖರ್ಜಿಯಿಂದ ಹಿಂದುರುಗಿದ್ದ ಧರ್ಮಪಾಲಯ್ಯ ಹಾಗೂ ಇತರ ಯಾತ್ರಾರ್ಥಿಗಳು ಉತ್ತರ ಪ್ರದೇಶದ ಮಿರ್ಜಾಪುರ ರೈಲು ನಿಲ್ದಾಣದಲ್ಲಿದ್ದಾಗ ಧರ್ಮಪಾಲಯ್ಯಗೆ ತೀವ್ರ ಎದೆನೋವು ಉಂಟಾಅಗಿ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

https://pragati.taskdun.com/karnatakaraintwo-deathcyclone/

Home add -Advt

Related Articles

Back to top button