Latest

ಮಹಿಳೆ ಹತ್ಯೆ ಮಾಡಿ, ರುಂಡ ಕೈಲಿ ಹಿಡಿದು ಬಂದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಭುಬನೇಶ್ವರ್: 30 ವರ್ಷದ ವ್ಯಕ್ತಿಯೊಬ್ಬ ವೃದ್ಧ ಮಹಿಳೆಯೊಬ್ಬರನ್ನು ಕೊಲೆಗೈದು, ಮಹಿಳೆಯ ರುಂಡ ಬೇರ್ಪಡಿಸಿ, ತಲೆಯನ್ನು ಕೈಯಲ್ಲೇ ಹಿಡಿದುಕೊಂಡು 1 ಕಿಮೀ ದೂರದ ಪೊಲೀಸ್ ಔಟ್​ಪೋಸ್ಟ್​ಗೆ ಹೋಗಿ ಶರಣಾಗಿರುವ ಅಮಾನುಷ ಘಟನೆ ಒಡಿಶಾದ ಜಾಜಪುರ್ ಜಿಲ್ಲೆಯ ಛತಾರಾ ಗ್ರಾಮದಲ್ಲಿ ನಡೆದಿದೆ.

ತನ್ನ ಸಂಬಂಧಿಕನೊಬ್ಬನ ಸಾವಿಗೆ ಕಾರಣರಾದರೆಂದು ಆರೋಪಿಸಿ ವ್ಯಕ್ತಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೊಲೆಯಾದ ಮಹಿಳೆಯನ್ನು ನಂದಿನಿ ಪೂರ್ತಿ ಎಂದು ಗುರುತಿಸಲಾಗಿದೆ. ಆರೋಪಿ ಕಾರ್ತಿಕ ಕೇರಾಯ್ ಈ ಕೃತ್ಯ ಎಸಗಿದ್ದಾನೆ. ಕೊಲೆಯಾದ ಮಹಿಳೆ ಮಾಟಮಂತ್ರ ಮಾಡುತ್ತಿದ್ದು, ಅನಾರೋಗ್ಯಪೀಡಿತನಾಗಿದ್ದ ತನ್ನ ಸಂಬಂಧಿಕನ ಸಾವಿಗೆ ಆಕೆಯೇ ಕಾರಣವೆಂದು ಬಗೆದು ಆಕೆಯ ಕೊಲೆ ಮಾಡಿದ್ದಾನೆನ್ನಲಾಗಿದೆ.

ಮಹಿಳೆಯ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button