Karnataka NewsLatest

ಅಮಿತಾಬ್  ಹೆಸರು ಬಳಸಿಕೊಂಡು ಆನ್ ಲೈನ್ ವಂಚನೆಗಿಳಿದ ಖದೀಮರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇತ್ತೀಚೆಗೆ ಇಂತಹವುಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಹಣವನ್ನು ಕುಳಿತಲ್ಲಿಂದಲೇ ದೋಚುವ ಜಾಲ ತುಂಬಾ ದಿನಗಳಿಂದಲೂ ಸಕ್ರಿಯವಾಗಿವೆ.

ಎಚ್ಚರಿಕೆಯಿಂದಿರಲು ಬ್ಯಾಂಕ್ ಗಳು ಸದಾ ಜಾಗೃತಗೊಳಿಸುವ ಸಂದೇಶಗಳನ್ನು ಕಳಿಸುತ್ತವೆ. ಆದರೆ ಜನ ಹಣದಾಸೆಗೆ ಬಲಿಯಾಗಿ, OTP ಮತ್ತು ತಮ್ಮ ಮಾಹಿತಿಯನ್ನು ಬಿಟ್ಟು ಕೊಡುವುದರೊಂದಿಗೆ ಬ್ಯಾಂಕ್ ನ ಹಣ ಕಳೆದುಕೊಂಡು ತೊಂದರೆಗೆ ಒಳಗಾಗುವುದಿದೆ.

ಬಲೆಗೆ ಬೀಳಿಸಲು ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಮತ್ತು ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರನ್ನು ಖದೀಮರು ಬಳಸಿಕೊಳ್ಳುತ್ತಿದ್ದಾರೆ.

 

Home add -Advt

ಹಿಂದಿ ಭಾಷೆಯಲ್ಲಿ WhatsApp ಮೂಲಕ ಅವರು ಕೊಡುವ ಲಕ್ಕಿ ನಂಬರ್ ಮತ್ತು ಕೊಟ್ಟಿರುವ ಮ್ಯಾನೇಜರ್ ನಂಬರ್ ಕರೆ ಮಾಡಿದರೆ, ನಿಮ್ಮ ಮಾಹಿತಿಗಳು ವಂಚಕರಿಗೆ ಲಭ್ಯವಾಗಿ, ಹಣ ದೋಚುವ ಸಂಭವ ಅತೀ ಹೆಚ್ಚು.

ಜಾವೇದ್ ರೆಲ್ ಹೆಸರಿನ ಉತ್ತರ ಪ್ರದೇಶವೆಂದು ತೋರಿಸುವ +91 93695 33402 ನಿಂದ ಆಡಿಯೋ ತುಣುಕು ಬರುತ್ತದೆ.

ಇದೊಂದೇ ಅಲ್ಲ, ಇಂತಹ ಬೇರೆ ಬೇರೆ ನಂಬರ್ ಗಳಿಂದ ಕರೆ, ಮೆಸೇಜ್ ಬರುತ್ತಿದೆ.

ಹಾಗಾಗೀ ಈ ತರಹದ ಮೇಸೆಜ್ ಗಳು ಬಂದಾಗ ತಕ್ಷಣವೇ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಮರೆಯಬಾರದು. ನೀವು true caller App ಬಳಸುತ್ತಿದ್ದರೆ, ಇಂತಹ ನಂಬರ್ ಗಳನ್ನು ಕೆಂಪು ಮಾಡುವುದನ್ನು ಮರೆಯಬೇಡಿ.

ಎಲ್ಲಿ ಹೋದವು ನಮ್ಮೊಂದಿಗಿದ್ದ ಪಕ್ಷಿಗಳು ?

Related Articles

Back to top button