Kannada NewsKarnataka NewsLatest
ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿಹೋದ 7 ವರ್ಷದ ಬಾಲಕ

ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಪಟ್ಟಣದ ದಕ್ಷಿಣ ಭಾಗದಲ್ಲಿ ಹರಿಯುವ ಘಟಪ್ರಭಾ ಎಡದಂಡೆಯ ಜಮಖಂಡಿ ವಿಭಾಗ ನಾಲೆಯಲ್ಲಿ ಬಸವರಾಜ ಲಕ್ಷ್ಮಣ ಗೌಲತ್ತಿನವರ ಎಂಬ ಬಾಲಕ ಕೊಚ್ಚಿಹೋಗಿದ್ದಾನೆ.
ಶುಕ್ರವಾರ ಮಧ್ಯಾಹ್ನ ೧೨ ಗಂಟೆ ವೇಳೆಗೆ ಗೆಳೆಯರೊಂದಿಗೆ ಈಜಲು ಈ ಬಾಲಕ ಲಮಾಣಿ ತಾಂಡಾ ಹತ್ತಿರ ಕಾಲುವೆಗೆ ಹೋಗಿದ್ದ. ಕಾಲುವೆಗೆ ಇತ್ತೀಚೆಗೆ ಹೊಸದಾಗಿ ಕಾಂಕ್ರೀಟ್ ಕಾಮಗಾರಿಯಾಗಿದ್ದು, ನೀರಿನ ರಭಸಕ್ಕೆ ಸಿಲುಕಿ ಬಾಲಕ ಕೊಚ್ಚಿ ಹೋಗಿದ್ದಾನೆ.
ಸ್ಥಳೀಯರು ಹಾಗೂ ಪೋಷಕರಿಂದ ನಾಲೆಯಲ್ಲಿ ಬಾಲಕನನ್ನು ಹುಡುಕುವ ಕಾರ್ಯಾಚರಣೆ ನಡೆದಿದೆ. ಸುಲ್ತಾನಪೂರ ಮತ್ತು ಚಿಮ್ಮಡ ನಾಲೆಯ ಗೇಟ್ (ಕವಾಟ) ಗಳಿಗೆ ಬಲೆ ಹಾಕಲಾಗಿದ್ದು, ಬಾಲಕನ ದೇಹ ಪತ್ತೆಯಾಗಿಲ್ಲ. ಬಾಲಕನ ತಂದೆ-ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.




