Kannada NewsKarnataka NewsLatest

ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಆರ್ಥಿಕವಾಗಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರು – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬೆಳಗಾವಿ ಗ್ರಾಮೀಣ ಕ್ಷೇತ್ರ ಅತ್ಯಂತ ಸುಸಂಸ್ಕೃತರ ಕ್ಷೇತ್ರವಾಗಿದ್ದು, ಇಲ್ಲಿನ ಜನರು ಆರ್ಥಿಕವಾಗಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದ್ದಾರೆ. 
​ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿವನಗರ ಹಾಗೂ ಬಾದರವಾಡಿ ಪ್ರದೇಶಗಳಲ್ಲಿ ಆಯೋಜಿಸಲಾಗಿದ್ದ ಅರಿಸಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ಅಭಿವೃದ್ಧಿಪರ ನಡವಳಿಕೆ ಮನಸ್ಸಿಗೆ ಮುದ ನೀಡುತ್ತದೆ. ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು ಬರುತ್ತದೆ.  ಇಲ್ಲಿನ ಮಹಿಳೆಯರ ಮಾತೃವಾತ್ಸಲ್ಯ ನೋಡಿದರೆ ಹೃದಯ ತುಂಬಿ ಬರುತ್ತದೆ​. ಇಂತವರನ್ನು ಪಡೆದಿರುವ ನಾನೇ ಧನ್ಯ ಎಂದರು. ​
ಕ್ಷೇತ್ರಕ್ಕೆ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸ ತಂದಿದ್ದಕ್ಕಾಗಿ, ಶಾಸಕರೆನ್ನುವ ಯಾವುದೇ ಗತ್ತು ಇಲ್ಲದೆ ಕ್ಷೇತ್ರದ ಮನೆಮಗಳಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಇದ್ದಿದ್ದಕ್ಕಾಗಿ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು. 
ಈ ಸಮಯದಲ್ಲಿ ಶಂಕರ ದಳವಿ, ಈರಪ್ಪ ಕಲಕಾಂಬ್ಕರ್, ಹಣಮಂತ ಗಿರಿ, ರೇಖಾ ನಾಯ್ಕ, ಯುವರಾಜ ಕದಂ, ಗಣಪತಿ ಸಾಂಬ್ರೇಕರ್ ಭರ್ಮಾ ಪಾಟೀಲ, ಶಿವಾಜಿ ಡುಕರೆ, ಲಕ್ಷ್ಮಣ ಡುಕರೆ, ರಾಮ ನಾಯ್ಕ, ದುರ್ಗಪ್ಪ ನಾಯ್ಕ, ಅಣ್ಣಪ್ಪ ಪಾಟೀಲ, ಬೊಮ್ಮಣಿ ಪಾಟೀಲ, ವಿಷ್ಣು ನಾಯ್ಕ, ಮಹಾದೇವ ಪಾಟೀಲ, ಲಕ್ಷ್ಮಣ ಪಾಟೀಲ, ಮಾರುತಿ ಪಾಟೀಲ, ಬಾಹು ಪಾಟೀಲ, ದುಂಡು ನಾಯ್ಕ, ಲಕ್ಷ್ಮೀ ನಾಯ್ಕ, ಗೀತಾ ನಾಯ್ಕ, ಲಕ್ಷ್ಮೀ ಪಾಟೀಲ, ಸವಿತಾ ಪಾಟೀಲ, ಲತಾ ಪಾಟೀಲ, ಲಕ್ಷ್ಮೀ ದೇಸೂರಕರ್, ದೀಪಾ ಪಾಟೀಲ, ಆರಾಧನಾ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/belgaum-news/installation-of-updated-statue-of-chhatrapati-shivaji-maharaj/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button