Kannada NewsKarnataka NewsLatest

ಇಲ್ಲೂ 3 ರಾಮಮಂದಿರಗಳಿಗೆ ಶಿಲಾನ್ಯಾಸ

ಪ್ರಗತಿವಾಹಿನಿ ಸುದ್ದಿ, ಸವದತ್ತಿ –  ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂರಾರು ಸಾಧು ಸಂತರ ಸಮ್ಮುಖದಲ್ಲಿ  ಶ್ರೀ ರಾಮಮಂದಿರ ಭೂಮಿ ಪೂಜೆಯನ್ನು ನರೇವೇರಿಸಿದರು.
 ಈ ಐತಿಹಾಸಿಕ ಸವಿನೆನಪಿಗಾಗಿ ಹಾಗೂ ರಾಮ ಭಕ್ತರ ಒತ್ತಾಸೆಯಿಂದ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಯರಗಟ್ಟಿ ಗ್ರಾಮದಲ್ಲಿ, ಹುಲಿಕಟ್ಟೆ ಗ್ರಾಮದಲ್ಲಿ ಹಾಗೂ ಹಾಗೂ ಮಳ್ಳಿಕೇರಿ ಗ್ರಾಮದಲ್ಲಿ  ವಿಧಾನಸಭೆ ಉಪಸಭಾಪತಿ ಹಾಗೂ ಸವದತ್ತಿಯ ಶಾಸಕ,ಆನಂದ ಮಾಮನಿ ನೇತೃತ್ವದಲ್ಲಿ  ಶ್ರೀ ರಾಮ ಮಂದಿರಕ್ಕೆ ಭೂಮಿ ಪೂಜೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಜಿತ ದೇಸಾಯಿ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ವಿನಯ ದೇಸಾಯಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಮಂಡಲದ ಅಧ್ಯಕ್ಷರಾದ ಈರಣ್ಣಾ ಚಂದರಗಿ ಪದಾಧಿಕಾರಿಗಳಾದ ಚಂದ್ರಶೇಖರ್ ಬಾಬು ಬಜಂತ್ರಿ  ಆಯಾ ಗ್ರಾಮಗಳ ಹಿರಿಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು .
 ಸವದತ್ತಿ ವಿಧಾನಸಭಾ ಕ್ಷೇತ್ರದಿಂದ ಕರಸೇವೆಯಲ್ಲಿ ಭಾಗವಹಿಸಿದ ಐದು ಕರಸೇವಕರನ್ನು ಈ ಸಂದರ್ಭದಲ್ಲಿ ಅವರ ಮನೆಗಳಿಗೆ ತೆರಳಿ ಪಕ್ಷದ ಪರವಾಗಿ ಗೌರವಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button