
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ತಾಲೂಕಿನ ಮುಧೋಳ – ನಿಪ್ಪಾಣಿ ಮುಖ್ಯ ರಸ್ತೆಯಿಂದ ನಾಯಿಂಗ್ಲಜ ಗ್ರಾಮದವರೆಗೆ ರಸ್ತೆ ಸುಧಾರಣೆಗೆ ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಲೋಕೋಪಯೋಗಿ ಇಲಾಖೆಯಿಂದ ರೂ. 2.50 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಶುಕ್ರವಾರ ಕಾಮಗಾರಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ನಾಯಿಂಗ್ಲಜ ಗ್ರಾಮ ಪಂಚಾಯತ ಅಧ್ಯಕ್ಷ ನಾಯಿಕ, ಎಸ್ ಕೆ ಕುರಬರ, ಶರದ ಶಿಂಧೆ , ಸುನೀಲ ಮೋರೆ, ಕುಠಾಳಿ ಗ್ರಾಮದ ಮುಖಂಡರಾದ ಜಾನಕಾರೆ, ಬಾಬುರಾವ ಚೌಗಲಾ, ಶಂಕರ ದೆಮನ್ನವರ, ಪ್ರಕಾಶ ಮಗದುಮ್ಮ, ಧುಳಗುನವಾಡಿ ಗ್ರಾಮದ ಅಣ್ಣು ಮಗದುಮ್ಮ, ರಾವಸಾಬ ಕಮತೆ , ಕಮತೆ ಹಾಗೂ ನವಲಿಹಾಳ ಗ್ರಾಮದ ಸುನೀಲ ಕಮತೆ, ಹುವನ್ನವರ ಕುಠಾಳಿ, ನವಲಿಹಾಳ, ನಾಯಿಂಗ್ಲಜ ಹಾಗೂ ಧುಳಗುನವಾಡಿ ಗ್ರಾಮಸ್ಥರು ಹಾಜರಿದ್ದರು.

ಈ ವೇಳೆ ಮಾಜಿ ಜಿ ಪಂ ಸದಸ್ಯರಾದ ಸುಜಾತಾ ಖೋತ, ಮುಖಂಡರಾದ ಜಯಕುಮಾರ ಖೋತ, ಪ್ರಕಾಶ ಪಾಟೀಲ, ಉದಯ ಖೋತ, ರಾಜಕುಮಾರ ಖೋತ, ಅಣ್ಣಪ್ಪ ತಾರದಾಳೆ, ಜಿತೇಶ ಖೋತ, ಅನಿಲ ಖೋತ, ಮಲಗೌಡಾ ಪಾಟೀಲ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ