
ಪ್ರಗತಿವಾಹಿನಿ ಸುದ್ದಿ: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಸರ್ವರಿಗೂ ಸೂರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪ್ರಧಾನ ಮಂತ್ರಿ ಆವಾಸ್ ಯೋಜನೆ” ಯಡಿ ನಿಪ್ಪಾಣಿ ನಗರದಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆಮಾಡಲಾಗುವುದು.
ನಿಪ್ಪಾಣಿ ಕ್ಷೇತ್ರದಲ್ಲಿ ಯಾರೂ ಮನೆಯಿಲ್ಲದೇ ಸಂಕಟ ಅನುಭವಿಸಬಾರದು ಎಂಬುದು ನನ್ನ ಆಸೆಯಾಗಿದ್ದು, ಪ್ರತಿ ಬಡಕುಟುಂಬಕ್ಕೂ ಸೂರು ನಿರ್ಮಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಬಡ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಯಾವಾಗಲೂ ಶ್ರಮಿಸುತ್ತೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)-2.0 ಯೋಜನೆಯನ್ನು ಸರ್ವರಿಗೂ ಸೂರು ಒದಗಿಸಲು 4 ಮಾದರಿಗಳಲ್ಲಿ ಅನುಷ್ಠಾನಗೋಳಿಸಲಾಗುವದು.
1] ಫಲಾನುಭವಿ ನೇತೃತ್ವದ ವಸತಿ ನಿರ್ಮಾಣ.
2) ಪಾಲುಗಾರಿಕೆಯಲ್ಲಿ ವಸತಿ ನಿರ್ಮಾಣ.
3) ಕೈಗುಟುಕುವ ಬಾಡಿಗೆ ದರದಲ್ಲಿ ವಸತಿ ನಿರ್ಮಾಣ.
4)ಸಹಾಯಧನ ಯೋಜನೆಯಡಿಯಲ್ಲಿ ವಸತಿ ನಿರ್ಮಾಣ.
ಈ ಯೋಜನೆಯನ್ನು ನಗರ ಪ್ರದೇಶಗಳಲ್ಲಿ ಮಾತ್ರ ರಾಜೀವಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೋಳಿಸಲಾಗುವದು.ನಗರ ಸ್ಥಳೀಯ ಸಂಸ್ಥೆಗಳು ನಿವೇಶನರಹಿತ ಹಾಗೂ ವಸತಿರಹಿತರ ಕುಟುಂಬಗಳನ್ನು ಗುರುತಿಸಲು ಸರ್ವೇ ಮಾಡಿ ಆನ್ಲೈನನಲ್ಲಿ ಸಂಗ್ರಹಿಸಲಾಗುವದು.ನಿವೇಶನ ರಹಿತ ಹಾಗೂ ವಸತಿರಹಿತರ ಕುಟುಂಬಗಳನ್ನು ಈಕೆಳಗಿನಂತೆ ಅರ್ಹತೆ ಹೊಂದಿರಬೇಕು.ವಿವಾಹಿತ ಮಹಿಳೆ, ಏಕ ಮಹಿಳಾ ಒಡೆತನದ ಗೃಹಿಣಿ, ಮಾಜಿ ಯೋಧರು, ವಿಧವೆಯರು,ಅಂಗವಿಕಲರು,ಹಿರಿಯ ನಾಗರಿಕರು,ವಿಚ್ಛೇದಿತರು ಆಗಿರಬೇಕು.
ಫಲಾನುಭವಿಗಳು ಕುಟುಂಬದ ವಾರ್ಷಿಕ ಆದಾಯವನ್ನು ಈ ಕಳಕಂಂತೆ ಹೊಂದಿರಬೇಕು
EWS. Economically Weaker Section- ಆರ್ಥಿಕವಾಗಿ ದುರ್ಬಲರಾಗಿರುವರು- 3 ಲಕ್ಷ ರೂ. LIG- Low-Income Group- ಕಡಿಮೆ ಆದಾಯದ ಗುಂಪು-3.00 ರಿಂದ 6.00 ಲಕ್ಷ ರೂ ಒಳಗೆ.
MIG- Middle-Income Group- ಮಧ್ಯಮ ಆದಾಯದ ಗುಂಪು-6.00 ರಿಂದ 9.00 ಲಕ್ಷ ರೂ ಒಳಗೆ.ಫಲಾನುಭವಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇರೆ ಯಾವುದೇ ವಸತಿ ಯೋಜನೆಗಳಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು.
ಸಂಬಂಧಪಟ್ಟ ನಗರದಲ್ಲಿ ಫಲಾನುಭವಿಗಳು ಆನ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ 15-07-2025 ದಿನಾಂಕವಾಗಿರುತ್ತದೆ.ಫಲಾನುಭವಿ ಸ್ವಂತ ನಿವೇಶನ (ಜಾಗ) ಹೊಂದಿರಬೇಕು.ಅರ್ಜಿದಾರರು ಹೊಂದಿರಬೇಕಾದ ದಾಖಲೆಗಳು:-ಆಧಾರ ಕಾರ್ಡ,ನಿವೇಶನಕ್ಕೆ ಸಂಬಂಧಪಟ್ಟ ದಾಖಲೆ,ಆದಾಯ ಜಾತಿ ಪ್ರಮಾಣ,ಪಡಿತರ ಚೀಟಿ,ಬ್ಯಾಂಕ ಖಾತೆಯ ವಿವರ,ಹೊಂದಿರಬೇಕು.
ಈ ಯೋಜನೆಯಡಿ ಮನೆ ನಿರ್ಮಿಸಲು ಮನೆಯ ವಿಸ್ತೀರ್ಣವನ್ನು (ಕಾರ್ಪೇಟ ಏರಿಯಾ) ಈ ಕೆಳಕಂಡಂತೆ ನಿಗಧಿಪಡಿಸಲಾಗಿದೆ.ಪ್ರತಿ ಮನೆಗೆ ಕೇಂದ್ರ ಸರ್ಕಾರದಿಂದ 1.50ಲಕ್ಷ ರೂ.ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂ ಪ.ಜಾ.ಪ. ಪಂಗಡ 2.00 ಲಕ್ಷ (ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಆಯ್ಕೆಯಾಗಿದಲ್ಲಿ) ಸಹಾಯಧನ ನೀಡಲಾಗುವುದೆಂದು ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.