LatestUncategorized

*ಸಮುದ್ರದ ನೀರು ಉಪ್ಪು; ಬಿಜೆಪಿ ಕಾವೇರಿ, ಮಲಪ್ರಭಾ ನದಿಯಂತೆ ಶುದ್ಧವಾದದ್ದು ಎಂದ ಪ್ರಹ್ಲಾದ್ ಜೋಶಿ*

ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟ ಜೋಶಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕಾಂಗ್ರೆಸ್ ಸಮುದ್ರದ ನೀರು ಉಪ್ಪು, ಅದು ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿಯ ಲಿಂಗಾಯಿತ ಡ್ಯಾಂ ಒಡೆದಿದೆ. ದೊಡ್ಡ ದೊಡ್ಡ ಕಲ್ಲುಗಳು, ನೀರು ಹೊರ ಬರುತ್ತಿವೆ. ಹರಿಯವ ನೀರು ಕಾಂಗ್ರೆಸ್ ಎಂಬ ಸಮುದ್ರ ಸೇರುತ್ತಿವೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಸಮುದ್ರದ ನೀರು ಉಪ್ಪು. ಉಪ್ಪು ನೀರು ಯಾವ ಉಪಯೋಗಕ್ಕೂ ಬರಲ್ಲ, ಅದನ್ನು ಕಾಂಗ್ರೆಸ್ ನವರೇ ಇಟ್ಟುಕೊಳ್ಳಲಿ ಎಂದಿದ್ದಾರೆ.

ಬಿಜೆಪಿ ಮಲಪ್ರಭಾ, ಕಾವೇರಿ ನದಿ ನೀರಿನಂತೆ ಶುದ್ಧ ಹಾಗೂ ಪವಿತ್ರವಾದದ್ದು. ಜನರು ಬಿಜೆಪಿಯನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ನವರಿಗೆ ಈಗ ಲಿಂಗಾಯಿತರ ಬಗ್ಗೆ ಭಾರಿ ಸಿಂಪತಿ ಬಂದಿದೆ. ಅವರ ತುಷ್ಟೀಕರಣ ರಾಜ್ಯದ ಜನತೆ ಅರ್ಥವಾಗುತ್ತೆ ಎಂದು ಟಾಂಗ್ ನೀಡಿದ್ದಾರೆ.

https://pragati.taskdun.com/h-d-kumaraswamyhospitalizedfever/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button