Belagavi NewsBelgaum NewsKannada NewsKarnataka NewsNationalPolitics

*ಮೊಲ ಬೇಟೆಯಾಡಿ ರೋಡ್ ಶೋ: ಶಾಸಕನ ಪುತ್ರ ಹಾಗೂ ಸೋದರನ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ : ಮೊಲಗಳನ್ನು ಬೇಟೆಯಾಡಿ ರೋಡ್ ಶೋ ನಡೆಸಿದ ಮಸ್ಕಿ ಶಾಸಕ ಬಸನಗೌಡ ತುರವೀಹಾಳ್ ಪುತ್ರ ಹಾಗೂ ಸೋದರನ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. 

ಮಸ್ಕಿಯ ಶಂಕರಲಿಂಗ ಜಾತ್ರೆಯಲ್ಲಿ ಭಾಗಹಿಸಿದ್ದ ತುರವೀಹಾಳ್ ಅವರ ಪುತ್ರ ಮತ್ತು ಸೋದರ ಈ ಮೊಲಗಳನ್ನು ಬೇಟೆಯಾಡಿದ್ದಲ್ಲದೇ, ಅವುಗಳನ್ನು ಮಾರಕಾಸ್ತ್ರಗಳೊಂದಿಗೆ ಪ್ರದರ್ಶಿಸಿ ಮೆರವಣಿಗೆ ಮಾಡಿದ್ದರು. ಕಾಡುಮೊಲಗಳನ್ನು ಬೇಟೆಯಾಡಿ ಭರ್ಜಿಗೆ ಚುಚ್ಚಿ ಮಹಾನ್ ಸಾಧನೆಗೈದವರ ರೀತಿಯಲ್ಲಿ ರೋಡ್ ಶೋ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಡಿಸಿಎಫ್ ಪ್ರವೀಣ್ ಅವರು, ಶಾಸಕರ ಪುತ್ರ ಇರಲಿ ಅಥವಾ ಸೋದರ ಇರಲಿ. ಅಪರಾಧ ಅಪರಾಧವೇ. ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿದ್ದಾರೆ.

Home add -Advt

Related Articles

Back to top button