Latest

ಜಾತ್ರೆಗೆಂದು ಬಂದು ಕೃಷ್ಣಾ ನದಿಗೆ ಈಜಲು ಹೋದ ಬಾಲಕ; ಶವವಾಗಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಜಾತ್ರೆಗೆ ಬಂದ ಬಾಲಕ ಕೃಷ್ಣಾನದಿಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮೂದಗೊಟ್ಟ ಗ್ರಾಮದಲ್ಲಿ ನಡೆದಿದೆ.

ರಂಗನಾಥ್ (12) ಮೃತ ಬಾಲಕ. ಮೂದಗೊಟ್ಟ ಗ್ರಾಮಕ್ಕೆ ಜಾತ್ರೆಗೆಂದು ಬಂದಿದ್ದ ನಾಲ್ವರು ಬಾಲಕರು ಕೃಷ್ಣಾ ನದಿಗೆ ಈಜಲು ಹೋಗಿದ್ದಾರೆ. ಈ ವೇಳೆ ನಡಿಗಿಳಿದ ರಂಗನಾಥ್ ನಾಪತ್ತೆಯಾಗಿದ್ದಾನೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ನದಿಯಲ್ಲಿ ಬಾಲಕನಿಗಾಗಿ ಹುಡುಕಾಡಿದ್ದಾರೆ.

ಇದೀಗ ಬಾಲಕನ ಶವ ಪತ್ತೆಯಾಗಿದೆ. ನದಿಯಲ್ಲಿ ತೆಗೆದಿದ್ದ ಮರಳಿನ ಹುಂಡಿಯಲ್ಲಿ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button