Latest

ಮಳೆ ಹಾನಿ ನಿರ್ವಹಣೆಗೆ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ ಸಿಎಂ; ಇಲ್ಲಿದೆ ವಲಯವಾರು ಸಚಿವರ ಪಟ್ಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಳೆ ಹಾನಿ, ಸಮಸ್ಯೆ ನಿವಾರಣೆಗಾಗಿ ರಾಜಧಾನಿ ಬೆಂಗಳೂರಿನ 8 ವಲಯಗಳಿಗೆ ಸಚಿವರ ನೇತೃತ್ವದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಪಡೆ ರಚಿಸಿದ್ದಾರೆ.

8 ವಲಯಗಳಿಗೆ 7 ಸಚಿವರ ಉಸ್ತುವಾರಿಯಲ್ಲಿ ಕಾರ್ಯಪಡೆ ರಚನೆಯಾಗಿದೆ. ಸಚಿವರ ಜತೆಗೆ ಸಂಬಂಧಪಟ್ಟ ಸಂಸದರು, ಶಾಸಕರು, ಪಾಲಿಕೆ ಸದಸ್ಯರು, ಆಯುಕ್ತರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬೆಂಗಳೂರು ಪೂರ್ವ -ಡಾ.ಅಶ್ವತ್ಥನಾರಾಯಣ
ಬೆಂಗಳೂರು ಪಶ್ಚಿಮ – ಸಚಿವ ವಿ.ಸೋಮಣ್ಣ
ಬೆಂಗಳೂರು ದಕ್ಷಿಣ ವಲಯ – ಸಚಿವ ಆರ್.ಅಶೋಕ್
ಮಹದೇವಪುರ ವಲಯ – ಸಚಿವ ಭೈರತಿ ಬಸವರಾಜ್
ಬೊಮ್ಮನಹಳ್ಳಿ ವಲಯ- ಸಚಿವ ಗೋಪಾಲಯ್ಯ
ರಾಜರಾಜೇಶ್ವರಿ ನಗರ ವಲಯ – ಎಸ್.ಟಿ.ಸೋಮಶೇಖರ್
ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಿಗೆ – ಮುನಿರತ್ನ ಅವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

ಈ ಬಾರಿ ಹುಷಾರ್ – ಬೆಳಗಾವಿ BJP ನಾಯಕರ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಎಚ್ಚರಿಕೆ, ಯಾರಿಗೆ? ಏಕೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button