Latest

*ಬಿಜೆಪಿ ಲಿಂಗಾಯತರಿಗೆ ಎಷ್ಟು ಗೌರವ ಕೊಟ್ಟಿದೆ?; ರಾಜಕುಮಾರ ಟೋಪಣ್ಣವರ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಸ್ವಾಗತ. ಮೋದಿ ಅವರ ಭಾಷಣದಲ್ಲಿ ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರ ಬಗ್ಗೆ ಪ್ರಸ್ತಾಪಿಸಿರುವ ಅವರು ಬಿಜೆಪಿಯಲ್ಲಿ ಲಿಂಗಾಯತರಿಗೆ ಎಷ್ಟು ಗೌರವ ಕೊಟ್ಟಿದೆ ಎನ್ನುವುದು ಮನವರಿಕೆ ಮಾಡಿಕೊಳ್ಳಲಿ ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಪ್ರಶ್ನಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ‌ಲಿಂಗಾಯತರ ನಾಯಕ ಎಂದು ಗುರುತಿಸಿಕೊಂಡವರು. ಅವರಿಗೆ ವಯಸ್ಸಿನ ನೆಪ‌ ಹೇಳಿ ಯಡಿಯೂರಪ್ಪನವರಿಗೆ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯಾಗಿಸದೆ ಅವಮಾನಿಸಿದ್ದು ಕರ್ನಾಟಕದ ಜನತೆ ಮರೆತಿಲ್ಲ. ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ತಳಮಟ್ಟದಲ್ಲಿ ಸಂಘಟಿಸಿದ್ದು ಲಿಂಗಾಯತ ನಾಯಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವಾಗ ಕಣ್ಣೀರು ಹಾಕಿದ್ದು ಲಿಂಗಾಯತ ಸಮುದಾಯದ ಆಕ್ರೋಶಕ್ಕೆ‌ ಕಾರಣವಾಗಿತ್ತು ಎಂದು ಮೋದಿ ಮಾತಿಗೆ ತಿವಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಮಗೆ ಗೌರವ ಇದೆ. ಆದರೆ ಬೆಳಗಾವಿ ತಾಲೂಕಿನಲ್ಲಿರುವ ಮೂರು ಮತಕ್ಷೇತ್ರದಲ್ಲಿ ಬಿಜೆಪಿಯ ಲಿಂಗಾಯತ ನಾಯಕರಿಗೆ ಎಷ್ಟು ಜನರಿಗೆ ಸ್ಥಳೀಯ ಬಿಜೆಪಿ ಪಕ್ಷ ಗೌರವ ಕೊಟ್ಟಿದೆ ಎನ್ನುವುದು ಸ್ಪಷ್ಟಪಡಿಸಲಿ. ಲಿಂಗಾಯತರ ಮೇಲೆ ಗೌರವ ಇದ್ದರೆ ಬೆಳಗಾವಿ ತಾಲೂಕಿನ ಮೂರು ಮತಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡುತ್ತಾರೆಯೇ ಎಂದು ಟೋಪಣ್ಣವರ ಪ್ರಶ್ನಿಸಿದ್ದಾರೆ.

*ಯಡಿಯೂರಪ್ಪ ಅವರಿಗೆ ಮೋದಿ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು?: ಡಿ.ಕೆ. ಶಿವಕುಮಾರ್ ಪ್ರಶ್ನೆ*

https://pragati.taskdun.com/d-k-shivakumarb-s-yedyurappapm-modi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button