ಈರಣ್ಣ ಕಡಾಡಿ, ಅಶೋಕ್ ಗಸ್ತಿಗೆ ರಾಜ್ಯಸಭಾ ಟಿಕೆಟ್

ರಾಜ್ಯಸಭೆಗೆ ಬಿಜೆಪಿಯಿಂದ ಡಾರ್ಕ್ ಹಾರ್ಸ್? -ನಿಜವಾದ ಪ್ರಗತಿವಾಹಿನಿ ಸುದ್ದಿ

 

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಟಿಕೆಟ್ ಬಿಜೆಪಿಯ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ಸಿಕ್ಕಿದೆ.

ಪ್ರಭಾಕರ ಕೋರೆ ಮತ್ತು ರಮೇಶ್ ಕತ್ತಿ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಡಾರ್ಕ್ ಹಾರ್ಸ್ ಆಗಿ ಕಡಾಡಿ ಮತ್ತು ಗಸ್ತಿ ಹೊರಬಂದಿದ್ದಾರೆ. ಈ ಸಂಬಂಧ ಪ್ರಗತಿವಾಹಿನಿ ನಿನ್ನೆಯೇ ವರದಿ ಪ್ರಕಟಿಸಿತ್ತು.

ಗಸ್ತಿ ರಾಯಚೂರಿನವರಾಗಿದ್ದು, ಕಡಾಡಿ ಬೆಳಗಾವಿ ಜಿಲ್ಲೆ ಗೋಕಾಕ (ಹಾಲಿ ಮೂಡಲಗಿ) ತಾಲೂಕಿನವರು.

ಕಡಾಡಿ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪಕ್ಷ ನಿಷ್ಠೆಯಿಂದಾಗಿ ಅವರಿಗೆ ಈ ಅವಕಾಶ ಒದಗಿಬಂದಿದೆ.

ರಾಜ್ಯಸಭೆಗೆ ಬಿಜೆಪಿಯಿಂದ ಡಾರ್ಕ್ ಹಾರ್ಸ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button