Belagavi NewsBelgaum NewsKarnataka News
*ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಭಾರತೀಯ ಸೇನೆಗೆ ಬೆಂಬಲಿಸಿ ರ್ಯಾಲಿ*

ಪಗ್ರತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೋ ಸಿಎಂ ತ್ಯಾಗರಾಜ ಅವರ ನೇತೃತ್ವದಲ್ಲಿ ಆಪರೇಷನ್ ಸಿಂಧೂರ್ ಬೆಂಬಲಿಸಿ ವಿದ್ಯಾರ್ಥಿಗಳಿಂದ ಬೃಹತ್ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಇಂದು ಬೆಳಗಾವಿ ನಗರದ ನಗರದ ನೆಹರು ಕ್ರಿಡಾಂಗಣದಿಂದ ಡಿಸಿ ಕಚೇರಿಯವರೆಗೆ ವಿಶ್ವವಿದ್ಯಾಲಯದ 17ವಿಭಾಗದ ನೂರಾರು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಭಾರತದ ಪರವಾಗಿ “ರಕ್ತದ ಕಣ ಕಣ ಕುದಿಯುತ್ತಿದೆ, ಭಾರತ ಗೆಲುವು ಬಯಸುತ್ತಿದೆ” ಎಂದು ವಿಧ್ಯಾರ್ಥಿಗಳು ಘೋಷಣೆ ಕೂಗಿದರು.