Kannada NewsKarnataka NewsNational

*ನಿಷೇಧಿತ ವಸ್ತುಗಳ ಮಾರಾಟ: ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಂಜುಮನ್ ಇಂಜಿನಿಯರ್ ಕಾಲೇಜಿನ ಸಮೀಪ ಇರುವ ಪುರಸಭೆ ವಾಟರ ಫಿಲ್ಟರ್‌ ಟ್ಯಾಂಕ್‌ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಆರೋಪಿಗಳನ್ನು ಬಂದಿಸಿದ್ದಾರೆ.

ಬಂಧಿತರು ಭಟ್ಕಳ ಮೂಲದ ಹಿಲಾಲ್ ಸ್ಟ್ರೀಟ್, ಮಗ್ಗುಂ ಕಾಲೋನಿಯ ಮೊಹಮ್ಮದ್‌ ಜೀಯಾಮ್ (19), ನಸರುದ್ದೀನ ಶೇಖ್ (25), ನೌಮಾನ (25), ಮೊಹಮ್ಮದ್‌ ಫರಾನ ಬಂಧಿತ ಆರೋಪಿಗಳಾಗಿದ್ದಾರೆ.

ಇವರಿಂದ ಕೃತ್ಯಕ್ಕೆ ಬಳಸಿದ ಹುಂಡಾಯ್ ಕಂಪನಿಯ ವೆನ್ಯೂ ಕಾರು, 15 ಸಾವಿರ ಮೌಲ್ಯದ 370 ಗ್ರಾಂ ಗಾಂಜಾ ಹಾಗೂ 3,000 ಮೌಲ್ಯದ 1.8 ಗ್ರಾಂ ಎಂಡಿಎಂಎ ಷೇಧಿತ ಮಾದಕ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button