
ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಇತ್ತೀಚೆಗೆ ಕೆಲ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಹಾಗೂ ಅಭಿಮಾನಿಗಳ ವಿರುದ್ಧ ದೂರು ದಾಖಲಾಗಿದೆ.
ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗೂ ಫ್ಯಾನ್ಸ್ ವಿರುದ್ಧ ಧ್ರುವ ಸರ್ಜಾ ನೆರೆಮನೆ ಯುವಕ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ಮನೋಜ್ ಎಂಬುವವರು ದೂರು ನೀಡಿದ್ದಾರೆ.
ಪ್ರತಿದಿನ ಧ್ರುವ ಸರ್ಜಾ ಅಭಿಮಾನಿಗಳು ನಮ್ಮ ಮನೆಯ ಮುಂದೆ ಬೈಕ್, ಕಾರುಗಳನ್ನು ತಂದು ಪಾರ್ಕ್ ಮಾಡುತ್ತಾರೆ. ಗುಂಪು ಗೂಡಿಕೊಂಡು ಕಿರಿಕಿರಿ ಮಾಡುತ್ತಾರೆ. ಅಲ್ಲದೇ ಮನೆಯ ಗೋಡೆಗಳಿಗೆ ಉಗುಳುವುದು, ಕಾಲು ಚಾಚಿಕೊಂಡು ನಿಲ್ಲುವುದು ಮಾಡುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ, ಕಿರಿಕಿರಿಯಾಗುತ್ತಿದೆ ಎಂದು ಧ್ರುವ ಸರ್ಕಾ ಮನೆಯ ಪಕ್ಕದ ಮನೆ ಯುವಕ ಮನೋಜ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬನಶಂಕರಿ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ.




