Education

*ಶಾಲಾ ಶಿಕ್ಷಣ ಇಲಾಖೆಯ ಐವರು ಅಧಿಕಾರಿಗಳಿಗೆ ಬಡ್ತಿ, ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶ*

ಪ್ರಗತಿವಾಹಿನಿ ಸುದ್ದಿ: ಶಾಲಾ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆಗೂ ತತ್ಸಮಾನ ವೃಂದದ ಐವರು ಅಧಿಕಾರಿಗಳಿಗೆ ಬಡ್ತಿ ನೀಡಿ, ಮುಂದಿನ ಆದೇಶದವರೆಗೆ ಸೂಚಿಸಿದ ಹುದ್ದೆ ಹಾಗೂ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.

ಸಕ್ರಪ್ಪ ಗೌಡ ಜಿ.ಬಿರಾದಾರ ಅವರನ್ನು ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

Home add -Advt

ಸುಜಾತ ಚಿತ್ರದುರ್ಗ ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯದ ಪ್ರವಾಚಕರನ್ನು ಬೆಂಗಳೂರಿನ ರಾಜ್ಯ ಯೋಜನಾ ನಿರ್ದೇಶಕರ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ ಹುದ್ದೆಗೆ ನೇಮಿಸಲಾಗಿದೆ.

ಕೆ.ಎಸ್ ಪ್ರಕಾಶ್ ಅವರನ್ನು ಬೆಂಗಳೂರಿನ ಸಿ.ಎ.ಸಿ.ಸೆಲ್ ಕೆಜಿ.ರಸ್ತೆ ಬೆಂಗಳೂರು ಜಂಟಿ ನಿರ್ದೇಶಕ ಹುದ್ದೆ,

ಸಿ.ನಂಜಯ್ಯ ಅವರನ್ನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ಹುದ್ದೆ,

ಮೋಹನ್ ಕುಮಾರ್ ಹಂಚಾಟೆ – ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಲಬುರ್ಗಿ ಜಂಟಿ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

Related Articles

Back to top button