Kannada NewsKarnataka News

ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಶ್ರೀಮಂತ ಪಾಟೀಲ ಸಭೆ

ಪ್ರಗತಿವಾಹಿನಿ ಸುದ್ದಿ, ಕಾಗವಾಡ –  ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಸರಿಯಾಗಿ *ಶುದ್ಧ ಕುಡಿಯುವ ನೀರನ್ನು* ಪೂರೈಸುವ ಉದ್ದೇಶದಿಂದ *ಕುಡಿಯುವ ನೀರು ಸರಬರಾಜು* ಇಲಾಖೆಯ ಅಧಿಕಾರಿಗಳೊಂದಿಗೆ *ಕಾಗವಾಡ ಮತಕ್ಷೇತ್ರದ   ಶಾಸಕರು ಹಾಗೂ ಮಾಜಿ ಸಚಿವರಾದ  ಶ್ರೀಮಂತ (ತಾತ್ಯಾ) ಪಾಟೀಲ* ಅವರು ಸಭೆ ನಡೆಸಿದರು.
 *ಮದಭಾವಿ, ಬಳ್ಳಿಗೇರಿ, ಕೆಂಪವಾಡ ಹಾಗೂ ತಂಗಡಿ – ಕವಲಗುಡ್ಡ ಮಲ್ಟಿ ವಿಲೇಜ್* ವ್ಯಾಪ್ತಿಯಲ್ಲಿ ಬರುವ *ಪ್ರತಿಯೊಂದು ಗ್ರಾಮಗಳಿಗೂ ಮಲ್ಟಿ ವಿಲೇಜ್ ಮೂಲಕ ಬೇಸಿಗೆ ಕಾಲದಲ್ಲಿ ಸರಿಯಾಗಿ ಶುದ್ಧ ಕುಡಿಯುವ ನೀರನ್ನು* ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾದ  ಎ ಜೆ ಬನಕಾರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾದ  ವಿ ಎಸ್ ಹಿರೇಮಠ,  ಎಲ್ ಎಸ್ ಗೋಳಸಂಗಿ,  ಎನ್ ಬಿ ಚಿಪ್ಪರಗಿ,  ಆರ್ ಡಿ ಕಿತ್ತೂರ,  ಬಸವರಾಜ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Related Articles

Back to top button