Politics

*ಕಾರಲ್ಲೇ ಕುಳಿತು ಮದ್ದೂರು ವಡೆ ಸವಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದ ಮಾರ್ಗದಲ್ಲಿ ಮದ್ದೂರಿನಲ್ಲಿ ಮದ್ದೂರು ವಡೆ ಸವಿದಿದ್ದಾರೆ.

ಮೈಸೂರು ಕಾರ್ಯಕ್ರಮ ಮುಗಿಸಿ ವಾಪಾಸ್ ಬೆಂಗಳೂರಿಗೆ ಮರಳುವ ವೇಳೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮದ್ದೂರು ಟಿಫಾನೀಸ್ ಮಾಲೀಕ ರಾಮಕೃಷ್ಣ ಅವರು ನೀಡಿದ ಮದ್ದೂರು ವಡೆಯನ್ನು ಸಿಎಂ ಸಿದ್ದರಾಮಯ್ಯ ಕಾರಿನಲ್ಲೇ ಕುಳಿತು ಸಮಾಧಾನದಿಂದ ಸವಿದರು.


Related Articles

Back to top button