
ಪ್ರಗತಿವಾಹಿನಿ ಸುದ್ದಿ: ಕೆಕೆ ಕೊಪ್ಪ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ನೂತನ ಕಟ್ಟಡದ 2ನೇ ಹಂತದ ಕಾಮಗಾರಿಯ ಸಲುವಾಗಿ 16.66 ಲಕ್ಷ ರೂ. ಮೊತ್ತದ ಚೆಕ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ದೇವಸ್ಥಾನದ ಟ್ರಸ್ಟ್ ಕಮೀಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಸಂತೋಷ ಕಂಬಿ, ಸಿದ್ರಾಯಿ ವಾಲಿ, ಅಪ್ಪಣ್ಣ ನಂದಿ, ಸೋಮು ನಂದಿ, ತಿಪ್ಪಣ್ಣ ಮಾವಿನಕಟ್ಟಿ, ಚಂಬಯ್ಯ ಹಿರೇಮಠ, ಬಸಪ್ಪ ಡೊಂಗರಗಾವಿ, ಕಲ್ಲಪ್ಪ ನಂದಿ, ಸೋಮಪ್ಪ ಚಿನ್ನಣ್ಣವರ, ಶಿವಲಿಂಗಯ್ಯ ಪೂಜಾರಿ, ಶಂಕರಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.