Latest

ತಾಯಿ, ತಂಗಿಯನ್ನೇ ಗುಂಡಿಟ್ಟು ಹತ್ಯೆಗೈದ ಯುವಕ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಸಾಂಬಾರು ರುಚಿಯಾಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ತಾಯಿ ಹಾಗೂ ತಂಗಿಯನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡು ಬಳಿ ನಡೆದಿದೆ.

24 ವರ್ಷದ ಮಂಜುನಾಥ್ ಕೊಲೆ ಮಾಡಿದ ಆರೋಪಿ. ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ್ ಕುಡಿದ ಮತ್ತಲ್ಲೇ ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ತಾಯಿ ಪಾರ್ವತಿ ನಾರಾಯಣ ಹಸ್ಲರ್ (42) ಹಾಗೂ ತಂಗಿ ರಮ್ಯಾ ನಾರಾಯಣ ಹಸ್ಲರ್ (19) ಕೊಲೆಯಾದ ದುರ್ದೈವಿಗಳು. ಕುಡಿದು ಬಂದು ಜಗಳವಾಡಿದ ಮಂಜುನಾಥ್ ಊಟದ ವಿಚಾರವಾಗಿಯೂ ಕ್ಯಾತೆ ತೆಗೆದಿದ್ದಾನೆ. ಸಾಂಬಾರ್ ರುಚಿಯಾಗಿಲ್ಲ ಎಂದು ಜಗಳವಾಡಿದ ಮಂಜುನಾಥ್ ಬಳಿಕ ನಾಡ ಬಂದೂಕು ತೆಗೆದುಕೊಂಡು ತಾಯಿ ಹಾಗೂ ತಂಗಿಯ ಮೇಲೆ ಗುಂಡು ಹಾರಿಸಿದ್ದಾನೆ. ತಾಯಿ ಹಾಗೂ ತಂಗಿ ಇಬ್ಬರೂ ಗುಂಡೇಟಿಗೆ ಬಲಿಯಾಗಿದ್ದಾರೆ.

ಮಗನ ವಿರುದ್ಧ ತಂದೆ ನಾರಾಯಣ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಂಜುನಾಥ್ ನನ್ನು ಬಂಧಿಸಿದ್ದಾರೆ.

ಬೆಟ್ಟಿಂಗ್ ಭೂತ; ಸಾಲ ತೀರಿಸಲಾಗದೇ ಘಟಪ್ರಭಾ ನದಿಗೆ ಹಾರಿದ ವ್ಯಾಪಾರಿ
ಆಯುಧ ಪೂಜೆ; ಇಂದು ಬಂಗಾರದ ಬೆಲೆ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button