Karnataka NewsLatest

*ತಂದೆಯನ್ನೇ ಕೊಚ್ಚಿ ಕೊಲೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಆಸ್ತಿ ಆಸೆಗಾಗಿ ಮಗನೊಬ್ಬ ತನ್ನ ತಂದೆಯನ್ನು ಕೊಚ್ಚಿ ಕೊಲೆಗೈದಿರುವ ಘೋರ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಲವನಹಳ್ಳಿ ಗ್ರಾಮದಲ್ಲಿ ನಡೆದಿದೆ.

75 ವರ್ಷದ ತಂದೆ ವೆಂಕಟಪ್ಪ ಪುತ್ರನಿಂದಲೇ ಕೊಲೆಯಾದ ದುರ್ದೈವಿ. ಸಿದ್ದಪ್ಪ ತಂದೆಯನ್ನು ಹತ್ಯೆಗೈದ ಮಗ. ವೃದ್ಧ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಸಿದ್ದಪ್ಪ, ಕೃತ್ಯದ ಬಳಿಕ ಪರಾರಿಯಾಗಿದ್ದಾನೆ.

ಇತ್ತೀಚೆಗಷ್ಟೇ ತಂದೆ ವೆಂಕಟಪ್ಪ, ತಮ್ಮ ಜಮೀನು ಮಾರಾಟ ಮಾಡಿ 25 ಲಕ್ಷ ರೂಪಾಯಿ ಹಣವನ್ನು ಮಗಳಿಗೆ ನೀಡಿದ್ದರು. ಇದರಿಂದ ಸಿದ್ದಪ್ಪ ಕೋಪಗೊಂಡಿದ್ದ. ಹಣವನ್ನು ತನಗೆ ನೀಡುವಂತೆ ಕೇಳಿದ್ದ. ತಂದೆ ಹಾಗೂ ಮಗನ ನಡುವೆ ಇದೇ ವಿಚಾರವಾಗಿ ಜಗಳವಾಗಿತ್ತು. ಇದೇ ಕೋಪದಲ್ಲಿ ಮಗ ಸಿದ್ದಪ್ಪ ತಂದೆಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ.

ಕೊಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button