Kannada NewsLatest

ಬೆಳಗಾವಿಯಲ್ಲಿ ಸ್ಟಾರ್ಟ್ ಅಪ್ ಕಾನ್ ಕ್ಲೇವ್ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ಟಾರ್ಟ್ಅಪ್ ಕಂಪನಿಗಳಲ್ಲಿ ಇಂಟರ್ನ್ಶಿಪ್ ಮತ್ತು ವೃತ್ತಿ ಅವಕಾಶಗಳ ಬಗ್ಗೆ ಅರಿವು ಮೂಡಿಸಲು ಜಿ.ಐ.ಟಿ ಯ ವಿದ್ಯಾರ್ಥಿಗಳಿಗೆ 21 ಮೇ 2022 ರಂದು ಸ್ಟಾರ್ಟ್ ಅಪ್ ಕಾನ್ ಕ್ಲೇವ್ ನ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿಯ, ವಾಯವ್ಯ ಲ್ಯಾಬ್ಸ್ ನ ಸಹ ಸಂಸ್ಥಾಪಕಿ ಉಮಾ ಬೊಂಡಾಡ ಅವರು ಉದ್ಘಾಟಿಸಿ ಮಾತನಾಡಿ, ಸಣ್ಣ ಪ್ರಮಾಣದ ಕಂಪನಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಹಾಗೂ ಕೌಶಲ್ಯಗಳನ್ನು ಕಲಿಯುವ ಅಗತ್ಯವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ವಿಪಿ ಕೆಮಿಕಲ್ಸ್ ನ ವಿಶಾಲ ಪಟ್ಟಣಶೆಟ್ಟಿ ವಹಿಸಿದ್ದರು ಮತ್ತು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ವಿದ್ಯಾರ್ಥಿಗಳು ಉದ್ಯಮಶೀಲತಾ ಕೌಶಲ್ಯವನ್ನು ಕಲಿಯುವ ಸಂಸ್ಕೃತಿಯನ್ನು ಹೊಂದಲು ತಿಳಿಸಿದರು.

ಹೈದರಾಬಾದ್ನ ಸೆನ್ಸ್ಗಿಜ್ನ ಸಿಇಒ, ಅಜಯ್ ರಾವುಲ್, ಬೆಂಗಳೂರಿನ ಜಿನ್ಸರ್ವ್ನ ಸಿಇಒ, ಅಭಿಷೇಕ್ ಲಠೆ, ಬೆಳಗಾವಿಯ ಇಕೊಬಿಲ್ಜ್ನ ಸಿಇಒ,  ಅಮಿತ್ ಪಾಟೀಲ್ ಮತ್ತು ಬೆಂಗಳೂರಿನ ಕೋಚ್ಇಡಿನ ಸಿಇಒ , ಅನಿಕೇತನ ಅತಿಥಿಗಳಾಗಿ ಭಾಗವಹಿಸಿ,. ಸ್ಟಾರ್ಟಪ್ಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವುದು. ಇಂಟರ್ನ್ ಅಥವಾ ಪೂರ್ಣ ಸಮಯದ ಉದ್ಯೋಗಿಯಾಗಿ ಸ್ಟಾರ್ಟ್ಅಪ್ಗೆ ಸೇರಲು ಅಗತ್ಯವಿರುವ ಕೌಶಲ್ಯ ಮತ್ತು ವರ್ತನೆಗಳು ಮತ್ತು ಸ್ಟಾರ್ಟ್ಅಪ್ ಕಂಪನಿಯನ್ನು ಸ್ಥಾಪಿಸುವಲ್ಲಿನ ಸವಾಲುಗಳ ಮಹತ್ವದ ಕುರಿತು ಮಾತನಾಡಿದರು.

Home add -Advt

ರಾಜೇಂದ್ರ ಬೆಳಗಾಂವಕರ್, ಕೆ.ಎಲ್.ಎಸ್ ಜಿ.ಐ.ಟಿ ಆಡಳಿತ ಮಂಡಳಿ ಅಧ್ಯಕ್ಷರು, ಮಹಾವಿದ್ಯಾಲಯದಲ್ಲಿ ಅಸ್ತಿತ್ವದಲ್ಲಿರುವ ಸ್ಟಾರ್ಟ್ಅಪ್ಗಳಿಗಾಗಿ ಪರಿಸರ ವ್ಯವಸ್ಥೆಯನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೆಎಲ್ಎಸ್ ಜಿಐಟಿಯ ಟಿಪಿಒ ಪ್ರೊ.ಸತೀಶ ಹುಕ್ಕೇರಿ, ಮುಖ್ಯ ಅತಿಥಿಗಳನ್ನು ಮತ್ತು ಅತಿಥಿ ಉಪನ್ಯಾಸಕರನ್ನು ಸಭಿಕರಿಗೆ ಪರಿಚಯಿಸಿದರು. ಪ್ರಾಚಾರ್ಯ ಡಾ.ಜೆ.ಕೆ.ಕಿತ್ತೂರು ಸ್ವಾಗತಿಸಿದರು. ಐಐಪಿಸಿ ಸಂಯೋಜಕ ಡಾ.ಎಸ್.ಎಫ್.ರಾಡ್ ಕಾರ್ಯಕ್ರಮದ ಉದ್ದೇಶಗಳನ್ನು ನಿರೂಪಿಸಿದರು. ಜಿಐಟಿಯ . ವಾಣಿ ಹುಂಡ್ರೇಕರ ವಂದಿಸಿದರು. ಎಂಜಿನಿಯರಿಂಗ್ನ ವಿವಿಧ ಶಾಖೆಗಳ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರವಾಹಬಾಧಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ; ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

Related Articles

Back to top button