Latest

ಮಂಗಮಾಯವಾಗಿದ್ದ ಮಹಾರಾಷ್ಟ್ರ ಸರ್ಕಾರಿ ಬಸ್ ಕರ್ನಾಟಕದಲ್ಲಿ ಪತ್ತೆ!

ಪ್ರಗತಿವಾಹಿನಿ ಸುದ್ದಿ, ಲಾತೂರ್‌: ಕಳುವಾಗಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್  ಕರ್ನಾಟಕದಲ್ಲಿ ಪತ್ತೆಯಾಗಿದೆ!

ಮಹಾರಾಷ್ಟ್ರದ ಲಾತೂರ್ ಸಮೀಪದ ಔರಾದ ಶಹಾಜಾನಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ನಿಲಂಗಾ- ಶಹಜಾನಿ ಔರಾದ್ ಮಾರ್ಗದ ಬಸ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಚಾಲಕ ಬಾಲಾಜಿ ಕೋಕಣೆ ಆಗಷ್ಟೇ ತಮ್ಮ ಕರ್ತವ್ಯ ಮುಗಿಸಿ ಬಸ್ ನಿಲ್ಲಿಸಿ ತೆರಳಿದ್ದರು. ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಮಂಗಮಾಯವಾದ ಬೆನ್ನಿಗೇ ಬಸ್ ಚಾಲಕ, ನಿರ್ವಾಹಕ, ನಿಲ್ದಾಣದ ಅಧಿಕಾರಿಗಳು ಹಾಗೂ ಪ್ರಯಾಣಿಕರು ಬೆಚ್ಚಿಬಿದ್ದಿದ್ದರು.

ಬೆಳಗಿನಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಇದೀಗ ಈ ಬಸ್,  ನಾಪತ್ತೆಯಾದ ಸ್ಥಳದಿಂದ 14 ಕಿ.ಮೀ. ದೂರದಲ್ಲಿರುವ ಕರ್ನಾಟಕದ ಗಡಿಯ ಕೇಸರ್‌ ಜವಳಗಾ ಗ್ರಾಮದ ಬಳಿ ಪತ್ತೆಯಾಗಿದೆ.

ಇಷ್ಟಕ್ಕೂ ಈ ಬಸ್ ಕದ್ದ ಮಹಾಶಯ ಯಾರು? ಏಕೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿ ಯಾರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬಿಬಿಸಿ ಸಾಕ್ಷ್ಯಚಿತ್ರ; ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

https://pragati.taskdun.com/bbc-documentary-hearing-in-the-supreme-court-today/

*ಭೀಕರ ಅಪಘಾತ; ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟ ಕಂದಮ್ಮ*

https://pragati.taskdun.com/accidentkiddeathtipaturufathermother-critical/

*ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ*

https://pragati.taskdun.com/air-india-flightfireemergency-landing/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button