Kannada NewsLatestPolitics

*ಕೋರ್ಟ್ ದೋಷಿ ಎಂದ ಮೇಲೆ ಮುಗೀತು; ಮಾತನಾಡಲು ಏನೂ ಇಲ್ಲ ಎಂದ ಸುಮಲತಾ*

ಪ್ರಗತಿವಾಹಿನಿ ಸುದ್ದಿ: ಕೆ.ಆರ್.ನಗರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಶ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ತಾವು ಹೆಚ್ಚಿಗೆ ಮಾತನಾಡಲ್ಲ ಎಂದಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನ್ಯಾಯಾಲಯದ ಆದೇಶವನ್ನು ಯಾರೇ ಆದರೂ ಪಾಲಿಸಬೇಕು. ಈ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡುವುದಿಲ್ಲ ಎಂದು ಹೇಳಿದರು.

ಕೋರ್ಟ್ ತೀರ್ಪು ಕೊಟ್ಟಮೇಲೆ ಮಾತನಾಡಲು ಏನೂ ಇಲ್ಲ. ನ್ಯಾಯಾಲಯ ದೋಷಿ ಎಂದು ಹೇಳಿದ ಮೇಲೆ ಮುಗೀತು. ಕೋರ್ಟ್ ಏನು ಶಿಕ್ಷೆ ಪ್ರಕಟ ಮಾಡುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.

Home add -Advt


Related Articles

Back to top button