Kannada NewsKarnataka NewsLatest

ಸುವರ್ಣ ವಿಧಾನಸೌಧದ ಆವಾರದಲ್ಲಿ ಶಾವಿಗೆ: ರಹಸ್ಯ ಬಯಲು

ಸುವರ್ಣ ವಿಧಾನಸೌಧದ ಮಹತ್ವ, ಘನತೆ ಅರಿಯದ ಕೆಲಸದ ಮಹಿಳೆ ಮಾಡಿದ ಎಡವಟ್ಟು ದೊಡ್ಡ ಸುದ್ದಿಯಾಯಿತು.

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಶಾವಿಗೆ ಒಣಗಿಸಿರುವ ಫೋಟೋ, ಸುದ್ದಿ ಮಂಗಳವಾರ ವೈರಲ್ ಆಗಿತ್ತು. ಇದೀಗ ಇದರ ರಹಸ್ಯ ಬಯಲಾಗಿದೆ.

ಸುವರ್ಣ ವಿಧಾನಸೌಧಧ ಮೆಟ್ಟಿಲುಗಳ ಬಳಿ ಶಾವಿಗೆಯನ್ನು ಒಣ ಹಾಕಲಾಗಿತ್ತು. ಅಷ್ಟೊಂದು ಭದ್ರತೆ ಇರುವ ಶಕ್ತಿ ಕೇಂದ್ರಕ್ಕೆ ಶಾವಿಗೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿತ್ತು.

Home add -Advt

ಸುವರ್ಣ ವಿಧಾನಸೌಧದ ಸ್ವಚ್ಛತೆ ಕೆಲಸಕ್ಕೆ ಬರುವ ಮಹಿಳೆಯೋರ್ವಳು ಸಾಬ್ರಾದಿಂದ ಶಾವಿಗೆಯನ್ನು ತಂದು ಇನ್ನೋರ್ವ ಮಹಿಳೆಗೆ ಕೊಟ್ಟಿದ್ದಳು. ಆ ಮಹಿಳೆ ಶಾವಿಗೆಯನ್ನು ಇನ್ನಷ್ಟು ಒಣಗಿಸಬೇಕು ಎಂದು ಸೀರೆ ಹಾಸಿ ಅಲ್ಲಿ ಒಣಹಾಕಿ ಸುವರ್ಣ ವಿಧಾನಸೌಧದ ಸ್ವಚ್ಛತೆ ಕೆಲಸ ಮಾಡುತ್ತಿದ್ದಳು.

ಈ ವೇಳೆ ಯಾರೋ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾರೆ. ಸುವರ್ಣ ವಿಧಾನಸೌಧದ ಮಹತ್ವ, ಘನತೆ ಅರಿಯದ ಕೆಲಸದ ಮಹಿಳೆ ಮಾಡಿದ ಎಡವಟ್ಟು ದೊಡ್ಡ ಸುದ್ದಿಯಾಯಿತು. ಸುವರ್ಣ ವಿಧಾನಸೌಧದಲ್ಲಿ ಸರಿಯಾಗಿ ಅಧಿವೇಶನ ನಡೆಯದಿದ್ದರೂ, ಕಚೇರಿಗಳು ಕೆಲಸ ಮಾಡದಿದ್ದರೂ ಶಾವಿಗೆ ಒಣಗಿಸಲಾದರೂ ಪ್ರಯೋಜನವಾಯಿತಲ್ಲ ಎನ್ನು ವ್ಯಂಗ್ಯೋಕ್ತಿ ಹೊರಬಂದಿತ್ತು.

ಇದೀಗ ಶಾವಿಗೆ ಒಣಗಿಸಿದ ಮಹಿಳೆಯನ್ನು ಕೆಲಸದಿಂದ ಮುಕ್ತಗೊಳಿಸಲಾಗಿದೆ.

ಸುವರ್ಣವಿಧಾನ ಸೌಧದ ಆವಾರದಲ್ಲಿ ಶಾವಿಗೆ, ಹಪ್ಪಳ, ಸಂಡಿಗೆ !

Related Articles

Back to top button