ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಹಿರೇಬಾಗೇವಾಡಿ ಗ್ರಾಮದಲ್ಲಿ ಶ್ರೀ ಪಡಿ ಬಸವೇಶ್ವರ ಯಾತ್ರಾ ನಿವಾಸ ನಿರ್ಮಾಣಕ್ಕೆ ಶಾಸಕಿ, ಮೈಸೂರ ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇಪ್ಪತೈದು ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ.
ಇದೇ ಸಮಯದಲ್ಲಿ ಮಹಿಳಾ ಹಾಲಿನ ಡೈರಿಯನ್ನು ಉದ್ಘಾಟಿಸಿದ ಹೆಬ್ಬಾಳಕರ್, ಲಕ್ಷ್ಮಿತಾಯಿ ಫೌಂಡೇಶನ್ ವತಿಯಿಂದ ಎಪ್ಪತೈದು ಸಾವಿರ ಮೌಲ್ಯದ ಗಣಕಯಂತ್ರವನ್ನು ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಮತ್ತು ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)