Kannada NewsKarnataka NewsLatest

*ನೀತಿ ಸಂಹಿತೆ ಉಲ್ಲಂಘನೆ: ಸಹಶಿಕ್ಷಕ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಸಹ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ರಾಯಚೂರು ಜಿಲ್ಲೆಯ ಉಡುಮಗಲ್ ಖಾನಾಪುರ ಶಾಲೆಯ ಸಹಶಿಕ್ಷಕ ಕೆ.ರಾಮು ಸಸ್ಪೆಂಡ್ ಆದವರು. ಏ.7ರಂದು ಕೆ.ಪಿ.ನಂಜುಂಡಿ ನಿವಾಸಕ್ಕೆ ಸಹ ಶಿಕ್ಷಕ ಕೆ.ರಾಮು ಆಗಮಿಸಿದ್ದರು.

ಅಂದು ಕೆ.ಪಿ.ನಂಜುಂಡಿ ಮನೆಗೆ ಉಪಹಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ರಾಜಕೀಯ ನಾಯಕರಿಗೆ ಕೆ.ರಾಮು ಉಪಹಾರ ಬಡಿಸಿದ್ದರು. ಶಿಕ್ಷಕ ಊಟ, ಉಪಹಾರ ಬಡಿಸುತ್ತಿದ್ದ ವಿಡಿಯೋ, ಫೋಟೋ ವೈರಲ್ ಆಗಿತ್ತು.

Home add -Advt

ಈ ಬಗ್ಗೆ ರಾಯಚೂರು ಜಿಲ್ಲಾ ಚುನಾವಣಾಧಿಕಾರಿ ತನಿಖೆ ನಡೆಸಿದ್ದರು. ತನಿಖೆ ಬಳಿಕ ಸಹಶಿಕ್ಷಕ ಕೆ.ರಾಮುನನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎ.ಚಂದ್ರಶೇಖರ್ ನಾಯಕ್ ಆದೇಶ ಹೊರಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button