Kannada News

ನಿಪ್ಪಾಣಿ: ಚಲಿಸುತ್ತಿದ್ದಾಗ ಟೈರ್ ಪಂಕ್ಚರ್ ಆಗಿ ಉರುಳಿದ ಬೈಕ್ ; ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ಕುರ್ಲಿ ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ನ ಟೈರ್ ಪಂಕ್ಚರ್ ಆಗಿ ಹತೋಟಿ ತಪ್ಪಿ ಉರುಳಿ ಬಿದ್ದು ಮಹಿಳೆ, ಯುವತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.  

ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ಲಕ್ಷ್ಮೀ ಆನಂದ ಕೊಪ್ಪದ (25) ಹಾಗೂ ರಾಮದುರ್ಗ ತಾಲೂಕಿನ ಕಟಕೋಳಗ್ರಾಮದ ಭಾಗ್ಯಶ್ರೀ ವಕಮಿ (13)

ಬೈಕ್ ಸವಾರ ಹಣಮಂತ ಸಕ್ರಿ (23) ಹಾಗೂ ಮಾರುತಿ ರಮೇಶ ಚುನಾಮಾದಾರ (6)  ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ನಿಪ್ಪಾಣಿ ಸರಕಾರಿ ಆಸ್ಪತ್ರೆಗೆ ದಾಖಸಲಾಗಿದೆ.

ಸ್ಥಳಕ್ಕೆನಿಪ್ಪಾಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ  ನಡೆಸಿದ್ದಾರೆ.    

Home add -Advt

10 ಪರ್ವತಾರೋಹಿಗಳು ಹಿಮಪಾತಕ್ಕೆ ಬಲಿ ; 8 ಜನರ ರಕ್ಷಣೆ

Related Articles

Back to top button