Belagavi NewsBelgaum NewsKannada NewsKarnataka News

ಕಳ್ಳತನ ಆರೋಪಿಯನ್ನು ಬಂಧಿಸಿದ ಉದ್ಯಮಬಾಗ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಮತ್ತು ಸರಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

ಬೆಳಗಾವಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಉಪ-ಪೊಲೀಸ್ ಆಯುಕ್ತರು (ಅ&ಸಂ) ಸ್ನೇಹ ಪಿ ವಿ ಮತ್ತು ಸಹಾಯಕ ಪೊಲೀಸ್ ಆಯುಕ್ತ ಹೆಚ್ ಶೇಖರಪ್ಪ ಖಡೇಬಜಾರ್ ಉಪ- ವಿಭಾಗರವರ ಮಾರ್ಗದರ್ಶನದಲ್ಲಿ ಉದ್ಯಮಬಾಗ್ ಪೊಲೀಸ್ ಠಾಣೆಯ ಇನ್ಸಪೆಕ್ಟರ ಡಿ. ಕೆ ಪಾಟೀಲ್ ಮತ್ತು ಪಿ. ಎಸ್ ಐ ಕಿರಣ ಸಿ ಹೊನಕಟ್ಟಿ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ಮನೆಕಳ್ಳತನ ಆರೋಪಿಯನ್ನು ಬಂಧಿಸಿದ್ದಾರೆ.

ರಫೀಕ್ ಮಹಮ್ಮದ್ ಶೇಖ ಹಾಗೂ ಸರಗಳ್ಳತನ ಆರೋಪಿತ ಪ್ರಜ್ವಲ್ ಖಾನಜೆ  ಎಂಬ ಆರೋಪಿಗಳನ್ನು ಉದ್ಯಮಭಾಗ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 1)49/2023 ಕಲಂ 454, 457,380 ಐ. ಪಿ. ಸಿ  2)04/2024 ಕಲಂ 454,457,380 ಐ. ಪಿ. ಸಿ 3)41/2022 ಕಲಂ 392 ಐ. ಪಿ ಸಿ 4) 57/2022 ಕಲಂ 392 ಐ. ಪಿ ಸಿ 5) 70/2023 ಕಲಂ 392 ಐ ಪಿ. ಸಿ ಹೀಗೆ ಒಟ್ಟು 05 ಪ್ರಕರಣಗಳಲ್ಲಿ ಬಂಧಿಸಲಾಗಿದೆ. 

ಉದ್ಯಮಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ, ಸರಗಳ್ಳತನ ಮಾಡಿದ 10,76,900 ರೂಪಾಯಿ ಬೆಲೆಯ 148 ತೂಕದ ಬಂಗಾರದ ಆಭರಣಗಳನ್ನು ಹಾಗೂ 3,800 ರೂಪಾಯಿ ಬೆಲೆಯ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಜುಲೈ 10 ಮತ್ತು 12 ರಂದು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. 

ಈ ತನಿಖಾತಂಡದಲ್ಲಿ ಉದ್ಯಮಬಾಗ್  ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಡಿ.ಕೆ ಪಾಟೀಲ, ಪಿ.ಎಸ್.ಐ ಕಿರಣ ಸಿ ಹೊನಕಟ್ಟಿ, ಪಿ.ಎಸ್.ಐ ಆರ್.ಪಿ. ಕದಮ, ಸಿ ಎಚ್ ಸಿ  ಟಿ. ಬಿ ಕುಂಚನೂರ್, ಸಿಪಿಸಿಗಳಾದ ಭರಮಣ್ಣ ಕರೆಗಾರ್, ಜಗದೀಶ್ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ್ ಕರ್ಕಿ,ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ   ಕಾರ್ಯಕ್ಕೆ ಬೆಳಗಾವಿ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button