Kannada NewsLatestNational

11 ವರ್ಷದ ಬಾಲಕನ ಕೊಂದು ಮಂಚದ ಸ್ಟೋರೇಜ್ ಬಾಕ್ಸ್ ನಲ್ಲಿ ಇಟ್ಟುಹೋದ ಮಹಿಳೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಹಿಳೆಯೊಬ್ಬಳು ಬಾಲಕನನ್ನು ಕೊಂದು ಮಂಚದ ಸ್ಟೋರೇಜ್ ಬಾಕ್ಸ್ ನಲ್ಲಿ ಬಚ್ಚಿಟ್ಟು ಪಲಾಯನಗೈದ ಘಟನೆ ಇಂದ್ರಪುರಿ ಪ್ರದೇಶದಲ್ಲಿ ನಡೆದಿದೆ.

ಪೂಜಾ ಎಂಬಾಕೆ ಈ ಕೃತ್ಯವೆಸಗಿದ್ದು ಈಕೆಯ ವಿಕೃತಿಗೆ ಬಾಲಕ ದಿವ್ಯಾಂಶ್ (11) ಬಲಿಯಾಗಿದ್ದಾನೆ. “ನಾನು ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ 6:45 ಕ್ಕೆ ಅವರ ನೃತ್ಯ ಶಿಕ್ಷಕರು ದಿವ್ಯಾಂಶ್ ತರಗತಿಗೆ ಬಂದಿಲ್ಲ ಎಂದು ಹೇಳಿದರು. ಮನೆಗೆ ತಲುಪಿ ನೋಡಿದಾಗ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು, ಅವನ (ಮಗನ) ಕೀಗಳು ನಾವು ಸಾಮಾನ್ಯವಾಗಿ ಇಡುವ ಸ್ಥಳದಲ್ಲಿರಲಿಲ್ಲ, ಆದರೆ ಅವನು ಹೊರಗೆ ಹೋಗಿರಬಹುದು ಎಂದು ಭಾವಿಸಿದೆ, ನಾನು ಬಾಗಿಲನ್ನು ಲಾಕ್ ಮಾಡಿ ನಾನು ಹೊರಗೆ ಹೋಗಿದ್ದೆ, ”ಎಂದು ಮೃತ ಬಾಲಕನ ತಾಯಿ ನೀಲು ತಿಳಿಸಿದ್ದಾರೆ.

“ಆತ ಹೋಗುತ್ತಿದ್ದ ಜಾಗಗಳಲ್ಲಿ ಹುಡುಕು ಕೊನೆಗೆ ಮನೆಗೆ ಬಂದಾಗ ಬೆಡ್ ಕೂಡ ಸರಿಯಾದ ಜಾಗದಲ್ಲಿರಲಿಲ್ಲ. ಅನುಮಾನದಿಂದ ಬೆಡ್ ಕೆಳಗಿನ ಸ್ಟೋರೇಜ್ ಬಾಕ್ಸ್ ನೋಡಿದಾಗ ಅದರಲ್ಲಿ ದಿವ್ಯಾಂಶ್ ದೇಹವಿತ್ತು. ಆತನ ಕತ್ತು ಹಿಸುಕಿರುವ ಕುರುಹುಗಳಿದ್ದವು. ಕೂಡಲೆ ಆಸ್ಪತ್ರೆಗೆ ಒಯ್ದರೂ ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು” ಎಂದು ಅವರು ಹೇಳಿದ್ದಾರೆ.

“ನಿಮ್ಮ ಪ್ರೀತಿಪಾತ್ರನನ್ನು ಸದ್ಯವೇ ಕಳೆದುಕೊಳ್ಳಲಿದ್ದೀರಿ” ಎಂದು ಮಹಿಳೆಯೊಬ್ಬಳು ಪದೇಪದೆ ತಮ್ಮ ಕುಟುಂಬಕ್ಕೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದುದಾಗಿಯೂ ನೀಲು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button