Kannada NewsLatest

ಇಡೀ ಜಗತ್ತೆ ದೇವರದ್ದು ನಾವೆಲ್ಲ ಬಾಡಿಗೆದಾರರು – ಶ್ರೀಶೈಲ ಶ್ರೀ

ಪ್ರಗತಿವಾಹಿನಿ ಸುದ್ದಿ, ಮಾಂಜರಿ:
ಮನುಷ್ಯನ ಭಾವನೆಗಳನ್ನು ಪವಿತ್ರಗೊಳಿಸಿ ಅಂತರಂಗವನ್ನು ಶುದ್ಧಿಕರಿಸಲು ದೇವಾಲಯಗಳು ಸಹಕಾರಿಯಾಗಲಿವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು .
ಅವರು ಚಿಕ್ಕೋಡಿ ತಾಲೂಕಿನ ಹಳೆ ಯಡೂರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಗಣೇಶ ಮತ್ತು ಹನುಮಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಶೈಲ ಜಗದ್ಗುರುಗಳು ಮಾತನಾಡುತ್ತಿದ್ದರು.

ಆರ್ಥಿಕ ಸಂಪತ್ತಿಗಿಂತ ಶಾಂತಿ ನೆಮ್ಮದಿ ಜೊತೆಗೆ ತೃಪ್ತಿಯೆಂಬ ಆಂತರಿಕ ಸಂಪತ್ತು ಮನುಷ್ಯನಲ್ಲಿರಬೇಕು. ಭಾರತೀಯ ಸಂಸ್ಕೃತಿಯಲ್ಲಿ ದೇವರ ಬಗ್ಗೆ ಇರುವ ಶ್ರದ್ಧಾಭಕ್ತಿಯ ಪ್ರತಿಕವಾಗಿ ದೇವಾಲಯಗಳು ನಿರ್ಮಾಣಗೊಳ್ಳುತ್ತಿವೆ. ದೇವಾಲಯಗಳು ನಿರ್ಮಿಸುವಂತೆ ಯಾವ ದೇವರು ಅರ್ಜಿ ಹಾಕುವುದಿಲ್ಲ. ಇಡೀ ಜಗತ್ತೆ ದೇವರದ್ದು ನಾವೆಲ್ಲ ಬಾಡಿಗೆದಾರರು. ವ್ಯಾಪಾರ ಮುಸಿಕೊಂಡು ಹೋಗಬೆಕಷ್ಟೇ. ದೇವರುಗಳ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಪಾಲಿಸಿದಾಗ ದೇವರ ಆರಾಧನೆಗೆ ಅರ್ಥ ಬರುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವಹಿಸಿದ್ದರು.  ಅವರು ಮಾತನಾಡಿ ದ್ವೇಷ ಅಸೂಹೆ ತೊರೆದು ಪ್ರೀತಿ ವಿಶ್ವಾಸದಿಂದ ಬದುಕಿದಾಗ ಮಾತ್ರ ದೇವರು ಒಲಿಯುತ್ತಾನೆ. ಭಗವದ್ಗೀತೆಯಲ್ಲಿರುವಂತೆ ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದಾ ಪಾಪ ಕರ್ಮಗಳನ್ನು ದೂರಮಾಡಿ ಸಂಕಷ್ಟಗಳನ್ನು ಪರಿಹರಿಸುತ್ತಾನೆ. ಚಿಂಕ್ಕಂದಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಹೇಳಿ ಕೊಡುವ ಕೆಲಸ ಪಾಲಕರಿಂದ ಆಗಬೇಕು.

ದುಶ್ಚಟಗಳಿಂದ ದೂರವಿರಿ ಎಂದರು. ಈ ವೇಳೆ ಬಸವಪ್ರಸಾದ ಜೊಲ್ಲೆ ಮಾತನಾಡಿ, ಮನುಷ್ಯ ಚಿಂತೆ ಮಾಡುವುದನ್ನು ಬೀಡಬೇಕಿದೆ. ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವುದು ಭಕ್ತರ ಕೆಲಸವಾಗಿದೆ. ಭಾರತೀಯ ಸಂಸ್ಕೃತಿ, ಆಚರಣೆ, ಪರಂಪರೆಯನ್ನು ದೇವಾಲಯಗಳಲ್ಲಿ ನೋಡಬಹುದಾಗಿದೆ. ನಾವೆಲ್ಲಾ ಜಾತಿ, ಧರ್ಮ, ಪಂಥಗಳನ್ನು ಬಿಟ್ಟು ಎಲ್ಲರೂ ಒಂದೇ ತಾಯಿಯ ಮಕ್ಕಳೆಂದು ಭಾವಿಸಿ ನಡೆದುಕೊಳ್ಳಬೇಕಿದೆ ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

ಈ ವೇಳೆ ಕಬ್ಬು ಬೆಳೆಗಾರ ಹೋರಾಟ ಸಂಗದ ಅಧ್ಯಕ್ಷರಾದ ಮಲ್ಲಪ್ಪಾ ಸಿಂಧೂರ ಹಾಗೂ
ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕ ಅಜಿತರಾವ ದೇಸಾಯಿ, ಮಲ್ಲಿಕಾರ್ಜುನ ಕೊರೆ, ತಾತ್ಯಾಸಾಹೇಬ ಕಾಟೆ, ಚೇತನ ಪಾಟೀಲ, ಭರತೇಶ ಬನವಣೆ, ಪ್ರಕಾಶ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಯುವರಾಜ ಪಾಟಿಲ, ಸುಕುಮಾರ ಚೌಗಲೆ, ಸಂತೋಷ ಭಾವಿದಂಡಿ, ಶ್ರೀಕಾಂತ ಉಮರಾಣೆ, ರಾಜು ಹಕಾರೆ, ಅಮರ ಬೊರಗಾಂವೆ, ಈರಗೌಡಾ ಪಾಟೀಲ, ಈರಗೌಡಾ ಚೌಗಲೆ, ಸಚೀನ ಪಾಟೀಲ, ನರಸಗೌಡಾ ಕಮತೆ, ಈರಣ್ಣಾ ಕೋಳಿ, ರಾವಸಾಹೇಬ ಪೋಲಿಸ್, ಅಣ್ಣಾಪ್ಪಾ ಬೋರಗಾಂವೆ, ಬಾಬಾಸಾಹೇಬ ಬೊರಗಾಂವೆ ಹಾಗೂ ಮಹಿಳೆಯರು ಮತ್ತು ಗ್ರಾಮಸ್ಥರು ಹಾಜರಿದ್ದರು ಶ್ರೀಕಾಂತ ಉಮರಾಣೆ ಸ್ವಾಗತಿಸಿ ಪರಶುರಾಮ ಪಾಟಿಲ ನಿರೂಪಿಸಿ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ ಮಾಡಿ. ಹೆಚ್ಚಿನ ಸುದ್ದಿಗಳಿಗಾಗಿ pragativahin.com ನೋಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button