Kannada NewsKarnataka NewsLatest

*ಭೀಕರ ಅಪಘಾತ: ರಸ್ತೆ ಪಕ್ಕದಲ್ಲಿ ನಿಂತಿದ್ದ ಯುವಕನ ಮೇಲೆ ಹರಿದ ಟಿಪ್ಪರ್; ಯುವಕ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಕುಡಿದ ಮತ್ತಿನಲ್ಲಿ ಟಿಪ್ಪರ್ ಓಡಿಸಿದ ಚಾಲಕ ರಸ್ತೆ ಬದಿ ನಿಂತಿದ್ದ ಯುವಕನ ಮೇಲೆ ಟಿಪ್ಪರ್ ಹರಿಸಿರುವ ಘಟನೆ ನಡೆದಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಸಾಹಿಲ್ ಪಟೇಲ್ ಮೃತ ದುರ್ದೈವಿ.

ಟಿಪ್ಪರ್ ಚಾಲಕ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಟಿಪ್ಪರ್ ಓಡಿಸಿದ್ದಾನೆ. ಮೊದಲು ಟ್ರ್ಯಾಕ್ಟರ್, ಮರ, ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ ಹೊಡೆದಿದ್ದಾನೆ. ನಂತರ ರಸ್ತೆ ಪಕ್ಕದಲ್ಲಿ ನಿಂತಿದ್ದ ಸಾಹಿಲ್ ಪಟೇಲ್ ಮೇಲೆ ಟಿಪ್ಪರ್ ಹರಿದು ಹೋಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ಸಾಹಿಲ್ ಮೃತಪಟ್ಟಿದ್ದಾನೆ.

Home add -Advt

ಅಪಘಾತದ ಬಳಿಕ ಟಿಪ್ಪರ್ ಸಹಿತ ಪರಾರಿಯಾಗಲು ಚಾಲಕ ಯತ್ನಿಸಿದ್ದ. ಈ ವೇಳೆ ಸ್ಥಳೀಯರು ಟಿಪ್ಪರ್ ಮೇಲೆ ಕಲ್ಲುತೂರಾಟ ನಡೆಸಿ ಚಾಲಕನನ್ನು ಹಿಡಿದಿದ್ದಾರೆ. ಟಿಪ್ಪರ್ ಚಾಲಕ ಜೀವನ್ ಎಂಬಾತನನ್ನು ಪೊಲೀಸರು ಬಧಿಸಿದ್ದಾರೆ.

Related Articles

Back to top button