Belagavi NewsBelgaum NewsEducationKannada NewsKarnataka NewsLatest

*ಜಿಐಟಿ ಎಂಬಿಎ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್‌ಎಸ್ ಗೋಗ್ಟೆ ತಾಂತ್ರಿಕ ಸಂಸ್ಥೆ, ಬೆಳಗಾವಿಯ ಎಂಬಿಎ ವಿಭಾಗವು ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ (೨೦೨೪-೨೦೨೬) ಬ್ಯಾಚ್‌ಗಾಗಿ ೨೫ ಮಾರ್ಚ್ ೨೦೨೫ ರಂದು ಔಟ್‌ಬೌಂಡ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಕಾರ್ಯಕ್ರಮವನ್ನು ಶೂನ್ಯ ಫಾರ್ಮ್ ರಿಟ್ರೀಟ್, ಬೆಳಗುಂದಿಯಲ್ಲಿ ನಡೆಸಲಾಗಿದ್ದು, ೧೧೨ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಉದ್ದೇಶ ಗುಂಪಿನ ನಡವಳಿಕೆಯನ್ನು ಅರಿತುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳನ್ನು ವೈಯಕ್ತಿಕ ನಡವಳಿಕೆಯ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಅಂತಃಸ್ಪರ್ಶಾತ್ಮಕ ಮನೋಶಾಸ್ತ್ರವನ್ನು ಅನುಭವಿಸುವಂತೆ ಮಾಡುವುದು.

Related Articles

ವಿದ್ಯಾರ್ಥಿಗಳು ಟ್ರೆಕ್ಕಿಂಗ್, ಸೆಲ್ಫ್ ಡಿಫೆನ್ಸ್ , ಟಗ್ ಆಫ್ ವಾರ್, ಕ್ರಿಕೆಟ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಸ್ನೂಕರ್, ಸಾಫ್ಟ್ ಆರ್ಚರಿ, ಫುಟ್‌ಬಾಲ್ ಮತ್ತು ಬೋರ್ಡ್ ಗೇಮ್ಸ್ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿದ್ದರು.

ಈ ಎಲ್ಲಾ ಚಟುವಟಿಕೆಗಳು ತಂಡದ ಕೆಲಸ, ಬಾಂಧವ್ಯ, ಸಂವಹನ, ನಾಯಕತ್ವ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ, ನಿರ್ಧಾರ ಮೇಕಿಂಗ್, ಪ್ರೇರಣೆ, ಬದಲಾವಣೆ ಮತ್ತು ವೈಯಕ್ತಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಉತ್ತಮತೆಯನ್ನು ತರುವ ಉದ್ದೇಶವನ್ನು ಹೊಂದಿದ್ದವು.

Home add -Advt

ಡಾ. ರಾಜೇಂದ್ರ ಇನಾಂದಾರ್, ಡಾ. ಅಮೀತ್ ಚಾಟೆ, ಪ್ರೊ. ಮಾರುತಿ ಸದಾವರ್, ಪ್ರೊ. ಸಂಜೀವಿನಿ ಗುರ್ಜರ್, ಮತ್ತು ಪ್ರೊ. ಅಂಜಲಿ ಅಗರ್ವಾಲ್ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದರು.

ಕೆಎಲ್‌ಎಸ್ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಎಮ್. ಎಸ್. ಪಾಟೀಲ್ ಮತ್ತು ಎಂಬಿಎ ಡೀನ್ ಡಾ. ಎಚ್. ಎನ್. ಶಿವಪ್ರಸಾದ್ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Related Articles

Back to top button