Kannada NewsKarnataka NewsLatest

ರಾಘವೇಂದ್ರ ಜೋಶಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ನಿಧನರಾಗಿದ್ದಾರೆ.  ಅವರಿಗೆ 78 ವರ್ಷ ವಯಸ್ಸಾಗಿತ್ತು.
ಬೆಳಗ್ಗೆ ವಾಕಿಂಗ್ ಮುಗಿಸಿ ಬಂದವರೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಮಹಾರಾಷ್ಟರ್ ಏಕೀಕರಣ ಸಮಿತಿಯ ಕಿರಿಕ್ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದ್ದ ಅವರು, ನಾಡೋಜ ಎನ್ನುವ ದಿನ ಪತ್ರಿಕೆ ಆರಂಭಿಸಿದ್ದರು. ಸಧ್ಯ ನಿರ್ಭೀತ ಎನ್ನುವ ವಾರಪತ್ರಿಕೆ ನಡೆಸುತ್ತಿದ್ದರು.

Related Articles

Back to top button