Latest

ಕಾಮುಕನಿಗೆ ಬಿತ್ತು ಸಾರ್ವಜನಿಕರಿಂದ ಧರ್ಮದೇಟು

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನು ಕದ್ದು ನೋಡುತ್ತಿದ್ದ ಕಾಮುಕನೋರ್ವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಶಿನಾಥ ಧರ್ಮದೇಟು ತಿಂದ ಕಾಮುಕ.

ಮಹಿಳೆಯರು ಬರ್ಹಿರ್ದೆಸೆಗೆ ತೆರಳಿದ್ದಾಗ ಆರೋಪಿ ಕಾಶಿನಾಥ ಗಿಡದ ಮೇಲೆ ಕುಳಿತು ಕದ್ದು ಕದ್ದು ಮಹಿಳೆಯರನ್ನು ನೋಡುತ್ತಿದ್ದನು. ಇಂದು ಕೂಡ ಕಾಶಿನಾಥನ ಈ ಕೃತ್ಯ ಮುಂದುವರೆದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಆತನನ್ನು ಹಿಡಿದು, ರಸ್ತೆಯಲ್ಲಿ ನಿಲ್ಲಿಸಿ ಬಟ್ಟೆ ಬಿಚ್ಚಿ ಚಪ್ಪಲಿ ಸೇವೆ ಮಾಡಿದ್ದಾರೆ. ಸ್ಥಳೀಯರು ಬಡಿಗೆಯಿಂದ ಹಿಗ್ಗಾಮುಗ್ಗಾ ಧರ್ಮದೇಟು ನೀಡಿ ತಾಳಿಕೊಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆ ಕೂಡ ಆರೋಪಿ ಕಾಶಿನಾಥ ಇಂತದ್ದೇ ಹಲವು ಚೇಷ್ಟೇಗಳನ್ನು ಮಾಡಿ ಧರ್ಮದೇಟು ತಿಂದಿದ್ದ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button