Kannada NewsKarnataka News

ಬೆದರಿಕೆ, ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ,  ನಾಗರಮುನ್ನೋಳಿ; ರಾಯಬಾಗ ಮತಕ್ಷೇತ್ರದ ಜನರು ಮು​ಗ್ದರು​.​ ಅವರು ಯಾರಿಗೂ ಹೆದರಬೇಕಾಗಿಲ್ಲ. ಅವರ  ಸಮಸ್ಯೆಗಳನ್ನು ​ಪರಿಹರಿಸಲು ನಮ್ಮ ಪಕ್ಷ ಬದ್ದವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು​.​ 
ಅವರು ಗುರುವಾರ​ ನಾಗರಮುನ್ನೋಳಿ​  ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷ​ತ್​ ಅಭ್ಯರ್ಥಿ ಚನ್ನರಾಜ ಹ​ಟ್ಟಿಹೊಳಿ ಪರ ಪ್ರಚಾರ ಕೈಗೊಂಡು ಮಾತನಾಡಿ​ದರು.
  ಪಕ್ಷೇತರ ಅಭ್ಯರ್ಥಿಗಳ ಅಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಪಕ್ಷದ ಅಭ್ಯ​ರ್ಥಿಗೆ​ ಮೊದಲ ಪ್ರಾಶ​ಸ್ತ್ಯದ​ ಮತ ನೀಡು​ವ​ ಮೂಲಕ ಆಯ್ಕೆ ಮಾಡ​ಬೇಕು. ತನ್ಮೂಲಕ​ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು ಎಂದರು​.​ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು​.​  ಮಾಜಿ.ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪಾ ಮರ‍್ಯಾಯಿ, ವಿನಾಯಕ ಕುಂಬಾರ, ವಿ.ಬಿ.ಈಟಿ, ಎಮ್.ಬಿ.ಆಲೂರೆ, ನಿಜಾಮ್ ಫೆಂಢಾರಿ, ದಾನಪ್ಪಾ ಕೊಟಬಾಗಿ, ಎಚ್.ಎಸ್.ನಸಲಾಪೂರೆ, ಶಿವಾನಂದ ಮರ‍್ಯಾಯಿ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ,​ ​ಶಿವಪುತ್ರ ಮನಗೂಳಿ, ರಾಜು ಕುಂಬಾರ, ಬಸವರಾಜ ಕುಂಬಾರ, ಡಾ ಎಮ್,ಬಿ,ಕುಂಬಾರ, ಅನಿಲ ಈಟಿ, ಸಿದೋಜಿರಾವ​​ ದೇಸಾಯಿ ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button