*ದಾರ್ಶನಿಕರ ಮಾರ್ಗದಲ್ಲಿ ನಡೆಯುವುದು ಜೀವನದ ಸಾರ್ಥಕತೆ: ಶಾಸಕ ಅಭಯ ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ನಾಡಿನ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದರಿಂದ ಜೀವನದ ಸಾರ್ಥಕತೆ ಅಡಗಿದೆ ಎಂದು ಶಾಸಕರಾದ ಅಭಯ ಪಾಟೀಲ ಅವರು ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಏ.2) ವಡಗಾವಿಯ ಸಫಾರಗಲ್ಲಿ. ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜರುಗಿದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ತತ್ವಗಳು ಹಾಸುಹೊಕ್ಕಾಗಿ ವಿಸ್ತರಿಸಿದ್ದು ವಚನಕಾಲದ ದೊಡ್ಡ ಆಂದೋಲನವೆಂದು ಅವರು ಬಣ್ಣಿಸಿದರು. ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರವಾದದ್ದು, ಇವರು ತಮ್ಮ ವಚನಗಳ ಮೂಲಕ ಗುರುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ. ಗುರುಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಂತಹ ದೇವರ ದಾಸಿಮಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗುಳೇದಗುಡ್ಡದ ಶ್ರೀ ಗುರುಸಿದ್ಧೇಶ್ವರ ಬೃಹನ್ಮಠ, ಪಟ್ಟಸಾಲಿ ಗುರುಪೀಠದ ಶ್ರೀ 1008 ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಮಾತನಾಡಿ ಶರಣ ದೇವರ ದಾಸಿಮಯ್ಯ ಜಯಂತಿ ಉತ್ಸವ ಅರ್ಥಪೂರ್ಣ ಸಂದೇಶ ಕೊಡುವ ಜಯಂತಿ ಇದಾಗಿದೆ, ಶರಣ ದೇವರ ದಾಸಿಮಯ್ಯನವರು ಕೇವಲ ಒಂದೆ ಸಮಾಜಕ್ಕೆ ಸೀಮಿತವಾಗದೇ ಅವರು ವಿಶ್ವಮಾಣ್ಯ ಶರಣರು ಎಂದು ಹೇಳಿದರು.
ಮಾನವನ ಶರೀರವನ್ನು ಮುಚ್ಚುವಂತ ನೇಕಾರ ಕಾಯಕ ದೇವರ ದಾಸಿಮಯ್ಯರವರದು: ತಮ್ಮ ಕಾಯಕ ದಾಂಪತ್ಯ ಜೀವನದ ಮೂಲಕ ದೇವನನ್ನೆ ಒಲಿಸಿಕೊಂಡ ಮಹಾನ ಶರಣ ದಾಸಿಮಯ್ಯನವರು.
ಸಮಾಜದಲ್ಲಿ ಮೇಲು-ಕೀಳು, ಅಂಗ ತಾರತಮ್ಯ ಹೀಗೆ ಮುಂತಾದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಹುಟ್ಟಿಕೊಂಡ ಶ್ರೇಷ್ಠ ಶರಣರು ದೇವರ ದಾಸಿಮಯ್ಯ ನವರು, ನಾಗರಿಕ ಸಮಾಜಕ್ಕೆ ಸಂಜೀವಿನಿ ಸಂತ. ದೇವರ ದಾಸಿಮಯ್ಯನವರ ಬಗ್ಗೆ ಸಮಾಜದ ಜನರು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಈಗಿನ ಸಮಾಜ ನಮ್ಮ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡು ಜೀವನ ನಡೆಸಬೇಕು. ನೇಕಾರ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂದು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಕರೇ ನೀಡಿದರು.
ಗಜಾನನ ಗುಂಜಾರ ಮಾತನಾಡಿ ದೇವರ ದಾಸಿಮಯ್ಯನವರು ಮಹಾನ ಮಹಿಳಾವಾದಿಗಳು, ವಚನಕಾರರು, ಇವರು ರಚಿಸಿದ 176 ವಚನಗಳನ್ನು ಲಂಡನನಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ. ಈ ಶರಣರ ವಚನಗಳು ತುಂಬಾ ಮಾರ್ಮಿಕವಾಗಿವೆ ಅವುಗಳನ್ನು ಓದಿ ತಿಳಿದುಕೊಳ್ಳಬೇಕು. ದೇವರ ದಾಸಿಮಯ್ಯ ಆದರ್ಶಪ್ರಿಯ ಶರಣರು; ಸಮಾಜದ ಜನರು ತಮ್ಮ ದಾಂಪತ್ಯ ಜೀವನ ಸುಖಕರವಾಗಿ ನಡೆಸಲು ದೇವರ ದಾಸಿಮಯ್ಯನವರ ದಾಂಪತ್ಯ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. ಅನೇಕ ಶರಣರು ಎಲ್ಲವುಗಳನ್ನು ಮೀರಿ ಸಮ-ಸಮಾಜದ ಸಲುವಾಗಿ ದುಡಿದಿದ್ದಾರೆ, ಶರಣರ ಸಮಾಜ ಸುಧಾರಣೆಯ ವಿಷಯಗಳನ್ನು ತಿಳಿದುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆಯ ಪೌರರಾದ ಮಂಗೇಶ ಪವಾರ, ಉಪ ಮಹಾಪೌರರಾದ ವಾಣಿ ವಿಲಾಸ ಜೋಶಿ, ಪ್ರೀತಿ ಕಾಮಕರ, ರೇಷ್ಮಾ ಕಾಮಕರ, ದೀಪಾಲಿ ಜೊಸಗಿ, ಲಕ್ಷ್ಮೀ ಲೋಕರಿ, ಉದಯ ಉಪರಿ, ಶಿವಾನಂದ ಉಪರಿ,
ಲೋಹಿತ ಮೋರಕರ, ಬಸವರಾಜ ಢವಳಿ, ವೆಂಕಟೇಶ ವನಹಳ್ಳಿ, ಮಾರುತಿ ಬಂಗೋಡಿ, ಕಿಶೋರ ಬಡಗಾವಿ, ಪ್ರಸನ್ನ ಲಟ್ಟಿ, ರಮೇಶ ಸೊಂಟಕ್ತಿ, ಬಸವರಾಜ ಜಡಪನ್ನವರ, ವಿ.ಜಿ. ನೀರಲಗಿಮಠ, ಹಾಗೂ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ
ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಉತ್ಸವದ ಅಂಗವಾಗಿ ಖಾಸಭಾಗದ ಶ್ರೀ ಬಸವೇಶ್ವರ ವೃತ್ತದಲ್ಲಿ ದೇವರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಸಕರಾದ ಅಭಯ ಪಾಟೀಲ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಶಾಸಕರಾದ ಅಭಯ ಪಾಟೀಲ, ಗುಳೇದಗುಡ್ಡದ ಶ್ರೀ ಗುರುಸಿದ್ಧೇಶ್ವರ ಬೃಹನ್ಮಠ, ಪಟ್ಟಸಾಲಿ ಗುರುಪೀಠದ ಶ್ರೀ 1008 ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿವ ಹಾಗೂ ನೇಕಾರ ಸಮಾಜದ ಬಾಂಧವರು ಭವ್ಯ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.