ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಮುಂದಾದ ಆರ್ ಬಿಐ?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯೆಸ್ ಬ್ಯಾಂಕನ್ನು ಸೂಪರ್​ಸೀಡ್ ಮಾಡಿರುವ ಆರ್​ಬಿಐ ಆ ಬ್ಯಾಂಕ್ ಪುನಶ್ಚೇತನಕ್ಕೆ ರೂಪುರೇಷೆ ಹಾಕಿದೆ. ಯೆಸ್ ಬ್ಯಾಂಕನ್ನು ರಕ್ಷಿಸಬೇಕಾಗಿರುವುದು ಅನಿವಾರ್ಯವಾಗಿದೆ. ಯೆಸ್ ಬ್ಯಾಂಕ್​ನ ಪುನಶ್ಚೇತನಕ್ಕೆ ರೂಪಿಸಲಾಗಿರುವ ಕರಡು ಯೋಜನೆಯ ಪ್ರತಿ ತಮಗೆ ಸಿಕ್ಕಿದೆ ಎಂದು ಎಸ್​ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಯೆಸ್ ಬ್ಯಾಂಕ್​ನ ಪುನಶ್ಚೇತನಕ್ಕೆ ರೂಪಿಸಲಾಗಿರುವ ಕರಡು ಯೋಜನೆಯ ಪ್ರತಿ ನಮಗೆ ಸಿಕ್ಕಿದೆ. ಈ ನಿಟ್ಟಿನಲ್ಲಿ ನಮ್ಮ ಹೂಡಿಕೆ ತಂಡ ಹಾಗೂ ಕಾನೂನು ತಂಡ ಕಾರ್ಯೋನ್ಮುಖವಾಗಿವೆ. ಈ ಕರಡು ಯೋಜನೆಯನ್ನು ನೋಡಿ ಅನೇಕ ಸಂಭಾವ್ಯ ಹೂಡಿಕೆದಾರರು ಎಸ್​ಬಿಐ ಬಳಿ ಬರುತ್ತಿದ್ದಾರೆ ಎಂದು ರಜನೀಶ್ ಕುಮಾರ್ ಹೇಳಿದರು.

ಎಸ್​ಬಿಐ ವಿವಿಧ ಹೂಡಿಕೆದಾರರನ್ನು ಆಹ್ವಾನಿಸುತ್ತಿದೆ. ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡಲು ಹಲವರಿಗೆ ಉತ್ಸಾಹ ಇದೆ. ಶೇ. 5ಕ್ಕಿಂತ ಹೆಚ್ಚು ಪಾಲಿನಷ್ಟು ಹಣ ಹೂಡಿಕೆ ಮಾಡಬಲ್ಲಂಥವರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದರು.

ಯೆಸ್ ಬ್ಯಾಂಕ್​ನ ಪುನರ್ನಿರ್ಮಾಣಕ್ಕೆ ರೂಪಿಸಲಾಗಿರುವ ಕರಡು ಯೋಜನೆ ಪ್ರಕಾರ ಆ ಬ್ಯಾಂಕ್​ನಲ್ಲಿ ಹೂಡಿಕೆ ಮಾಡುವವರು ಶೇ. 49ರಷ್ಟು ಪಾಲನ್ನು ಖರೀದಿಸಬೇಕಾಗುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಈ ಪಾಲು ಶೇ. 26ಕ್ಕಿಂತ ಕಡಿಮೆ ಇರಕೂಡದು ಎಂದು ವಿವರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button