Kannada NewsKarnataka NewsLatest
ಸಪ್ತಪದಿ ತುಳಿದ ಮೂರು ತಿಂಗಳಲ್ಲೇ ಇಹಲೋಕ ತ್ಯಜಿಸಿದ ಯುವತಿ; ಪತಿ ಮೇಲೆ ಪ್ರಕರಣ ದಾಖಲು

ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಸಂಭ್ರಮದಿಂದ ಸಪ್ತಪದಿ ತುಳಿದಿದ್ದ ಯುವತಿಯೊಬ್ಬರು ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣವೇಣಿ (26) ಆತ್ಮಹತ್ಯೆ ಮಾಡಿಕೊಂಡವರು. ಅವರು ಮೂರು ತಿಂಗಳ ಹಿಂದೆ ಕೋಲಾರ ಮೂಲದ ಪೃಥ್ವಿರಾಜ್ (30 ) ಅವರೊಂದಿಗೆ ಮದುವೆಯಾಗಿದ್ದರು. ಪೃಥ್ವಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೌಟುಂಬಿಕ ವಿಚಾರದಲ್ಲಿ ಪೃಥ್ವಿರಾಜ್ ಅವರೇ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ನಂತರ ನೇಣು ಬಿಗಿದಿದ್ದಾರೆ ಎಂದು ಕೃಷ್ಣವೇಣಿ ಕುಟುಂಬಸ್ಥರಯ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.