Cancer Hospital 2
Beereshwara 36
LaxmiTai 5

*ಯುವ-ಶ್ರೀದೇವಿ ದಾಂಪತ್ಯ ಕಲಹದ ಮಧ್ಯೆ ಸಪ್ತಮಿ ಗೌಡ ಆಡಿಯೋ ವೈರಲ್*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ಉದಯೋನ್ಮುಖ ನಟ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ದಾಂಪತ್ಯದಲ್ಲಿ ಬಿರುಗಾಳಿ ಬೀಸಿದ್ದು, ಯುವ ರಾಜ್ ಕುಮಾರ್ ಪತ್ನಿಯಿಂದ ವಿಚ್ಛೇದನ ಬಯಸಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದಕ್ಕೆ ಕಾರಣ ನಟಿ ಸಪ್ತಮಿಗೌಡ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಸಪ್ತಮಿಗೌಡ ನಟ ಯುವ ಜೊತೆ ತನ್ನ ಹೆಸರು ತಳುಕು ಹಾಕಿ ತೇಜೋವಧೆ ಮಾಡಲಾಗುತ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.

Emergency Service

ನಿರ್ಮಾಪಕ ವಿಜಯ್ ಕುರಗುಂದೂರು ಬಳಿ ಮಾತನಾಡಿದ್ದಾರೆ ಎನ್ನಲಾದ ಸಪ್ತಮಿಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ನನ್ನಿಂದ ಹಲವರಿಗೆ ನೋವಾಗಿದೆ, ನನ್ನದೇನು ತಪ್ಪಿಲ್ಲ, ಗುರು (ಯುವ ಮೊದಲ ಹೆಸರು) ಮಾತು ಕೇಳಿ ಹಾಗೆ ಮಾಡಿದೆ. ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಹಾಗಾಗಿ ನಾನು ಮುಂದುವರಿದೆ. ನಿಮ್ಮ ಸೆಟ್ ನಲ್ಲಿಯೇ ಆಗಿದ್ದು. ಹಾಗೆ ಆಗಬಾರದಿತ್ತು. ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ. ಆದರೆ ನಾನು ಹೇಳುವುದನ್ನೂ ಕೇಳಿ. ಸಪ್ತಮಿ ಇಷ್ಟು ಕೆಟ್ಟವಳಾ ಎಂದುಕೊಳ್ಳುವ ಮೊದಲು ಏನಾಯಿತು ಎಂಬುದನ್ನೂ ಕೇಳಿ…. ನಾನು ಹೇಳುತ್ತಲೇ ಇದ್ದೆ. ಇದೆಲ್ಲ ವರ್ಕೌಟ್ ಆಗಲ್ಲ. ಅಲ್ಲದೇ ನಾನು ಎಂದಿಗೂ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೋ ಎಂದು ಹೇಳಿಲ್ಲ. ಗುರುಗೆ ಅದು ಮೊದಲ ಸಿನಿಮಾ. ಯಾರಿಗೂ ತೊಂದರೆ ಆಗಬಾರದು. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ ಎಂದು ಆಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

‘ಯುವ’ ಸಿನಿಮಾ ಸೆಟ್ ನಲ್ಲಿ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಬಂದು ಜಗಳ ಮಾಡಿದ್ದರಂತೆ. ಈ ವೇಳೆ ನಿರ್ಮಾಪಕ ವಿಜಯ್ ಕಿರಗುಂದೂರು ಸಪ್ತಮಿಗೌಡ ಹಾಗೂ ಯುವ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಬಳಿಕ ಸಪ್ತಮಿಗೌಡ, ವಿಜಯ್ ಕಿರಗಂದೂರು ಅವರಿಗೆ ಈ ಆಡಿಯೋ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಆಡಿಯೋ ಸಪ್ತಮಿ ಗೌದ ಅವರದ್ದೇ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಆದರೆ ಧ್ವನಿ ಸಪ್ತಮಿಗೌಡ ಅವರ ಧ್ವನಿಯಂತೆಯೇ ಇದೆ ಎಂದು ತಿಳಿದುಬಂದಿದೆ.

Bottom Add3
Bottom Ad 2