ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಅಕಾಡೆಮಿ ಆಫ್ ಕಂಪೆರೇಟಿವ್ ಫಿಲಾಸಫಿ ಆಂಡ್ ರಿಲಿಜಿಯನ್ (ಎಸಿಪಿಆರ್) ವತಿಯಿಂದ ಹಿಂದವಾಡಿಯ ಎಸಿಪಿಆರ್ ಗುರುದೇವ ರಾನಡೆ ಮಂದಿರದಲ್ಲಿ ಫೆ.೨೩ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೧.೩೦ ರವರೆಗೆ ಪುಸ್ತಕ ಬಿಡುಗಡೆ ಹಾಗೂ ಮಹಿಳಾ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.
ನಿವೃತ್ತ ಉಪನ್ಯಾಸಕಿ ಡಾ. ಮಧುಮತಿ ಕುಲಕರ್ಣಿ ರಚಿಸಿರುವ ’ಶ್ರೀ ಅರಬಿಂದೋಸ್ ಸಾವಿತ್ರಿ : ಆನ್ ಅಪೊಕ್ಯಾಲಿಪ್ಟಿಕ್ ಲಿಟರೇಚರ್’ ’ನೆಕ್ಟಾರ್ ಎಸ್ಸೆನ್ಸ್ ಆಫ್ ದಿ ಗ್ಲೋರಿ ಡಿವೈನ್’ ಕೃತಿಗಳನ್ನು ಶಾಸಕಿ ಶಶಿಕಲಾ ಜೊಲ್ಲೆ ಬಿಡುಗಡೆ ಮಾಡಲಿದ್ದಾರೆ. ಲಿಂಗರಾಜ ಕಾಲೇಜಿನ ಇಂಗ್ಲಿಷ್ ಭಾಷಾ ವಿಭಾಗದ ಮುಖ್ಯಸ್ಥೆ ಡಾ. ಗುರುದೇವಿ ಹುಲೆಪ್ಪನವರಮಠ ಹಾಗೂ ಗೋಗಟೆ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಪ್ರೊ. ಸುಲಭಾ ಜೋಶಿ ಕೃತಿ ಪರಿಚಯ ಮಾಡಲಿದ್ದಾರೆ.
ನಂತರ ನಡೆಯುವ ಮಹಿಳಾ ಸಮಾವೇಶದಲ್ಲಿ ರಾಣಿ ಚನ್ನಮ್ಮ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಿಸಿಪಿ ಸೀಮಾ ಲಾಟ್ಕರ್, ಲಿಂಗರಾಜ ಕಾಲೇಜು ಉಪನ್ಯಾಸಕ ಡಾ. ಶರಯೂ ಪೋತ್ನಿಸ್ ಉಪನ್ಯಾಸ ನೀಡಲಿದ್ದಾರೆ.
ದಂಡು ಮಂಡಳಿ ಸಿಇಒ ದಿವ್ಯಾ ಎಸ್. ಹೊಸೂರ ಹಾಗೂ ಒಲಿಂಪಿಕ್ ಪದಕ ವಿಜೇತೆ ಮಲಪ್ರಭಾ ಜಾಧವ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಎಸಿಪಿಆರ್ ಅಧ್ಯಕ್ಷ ಅಶೋಕ ಪೋತದಾರ ಹಾಗೂ ಗೌರವ ಕಾರ್ಯದರ್ಶಿ ಎಂ.ಬಿ. ಝಿರಲಿ ತಿಳಿಸಿದ್ದಾರೆ.