Latest

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಆಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತೋತ್ಸವ ಸಮೀತಿ, ಬೆಳಗಾವಿ ಹಾಗೂ ಜಿಲ್ಲಾ ಜಂಗಮ ಅರ್ಚಕರ/ಪುರೋಹಿತರ ಸಂಘದ ವತಿಯಿಂದ ಇಂದು ಬೆಳಿಗ್ಗೆ 8 ಗಂಟೆಗೆ ವರಗುಳಿ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠ (ಕಲ್ಮಠ) ದಲ್ಲಿ  ಸಿದ್ಧರಾಮೇಶ್ವರ ಗದ್ದುಗೆಯ ಹಾಗೂ ಶ್ರೀ ರೇಣುಕಾಚಾರ್ಯರಿಗೆ ರುದ್ರಾಭಿಷೇಕವನ್ನು ಜರುಗಿಸಲಾಯಿತು.
ಸಾನಿಧ್ಯವನ್ನು ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು  ಹಾಗೂ ಶ್ರೀ ಅಮರ ಸಿದ್ಧೇಶ್ವರ ಸ್ವಾಮಿಗಳು  ವಹಿಸಿದ್ದರು.
ಡಾ. ನಾಗರಾಜ ಶಾಸ್ತ್ರಿಗಳು  ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಅನಿಲ ಮುಳವಾಡಮಠ ಅಧ್ಯಕ್ಷತೆ  ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸದ ಸುರೇಶ ಅಂಗಡಿ, ಜ್ಯೋತಿ ಭಾವಿಕಟ್ಟಿ, ಚನ್ನಯ್ಯಾ ವಿರಕ್ತಮಠ, ಮಹಾಂತೇಶ ರಣಗಟ್ಟಿಮಠ, ರುದ್ರಣ್ಣಾ ಚಂದರಗಿ, ವೇ. ಶಂಕರಯ್ಯಾ ಹಿರೇಮಠ, ವೇ. ಕೆ.ಎಸ್. ಯಡೆಯೂರಯ್ಯ ಶಾಸ್ತ್ರಿಗಳು, ತೇಜಶ್ವಿನಿ ಹಿರೇಮಠ ಉಪಸ್ಥಿತರಿದ್ದರು.
ವೇದಮೂರ್ತಿ ರಾಚಯ್ಯಾ ಹುಲಿಕಾಂತೀಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುರೇಶ ಅಂಗಡಿ  ಮಾತನಾಡಿ, ಪಂಚ ಪೀಠಗಳ ಕೊಡುಗೆ ಅಪಾರವಾದುದು. ಜಂಗಮ ಸಮಾಜ ಬೆಳೆಯಬೇಕು ಹಾಗೂ ಲಿಂಗ ಧೀಕ್ಷೆಯನ್ನು ಕೊಟ್ಟು ತಿಳಿಸಿ ಬೆಳೆಸಬೇಕು. ಗುರುವಿನ ಸ್ಥಾನದಲ್ಲಿ ಜಂಗಮ ಸಮಾಜಕ್ಕೆ ಸರಿಯಾದ ದಾರಿ ತೋರಬೇಕು ಎಂದರು.
ಶಶಿಧರಸ್ವಾಮಿ ಕಲ್ಮಠರಿಗೆ ರೇಣುಕ ವಿಭೂಷಣ ಹಾಗೂ  ಕೆ ಎಸ್. ಯಡೆಯೂರಯ್ಯ ಶಾಸ್ತ್ರಿಗಳಿಗೆ ವೈಧಿಕ ಶಿರೋಮಣಿ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಯಿತು.
ಸ್ವಾಮಿಗಳಿಂದ ಆಶೀರ್ವಚನ ನಡೆಯಿತು. ಕಾರ್ಯಕ್ರಮದ ನಂತರ ಮಹಾಪ್ರಸಾದ ಜರುಗಿತು.

Related Articles

Back to top button