Latest

ಆನಂದ ಚೋಪ್ರಾ ಅಭಿಮಾನಿಗಳ ಆಕ್ರೋಶ ಎದುರಿಸಿದ ಸಾಧುನವರ

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ:-

ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ವಿ.ಎಸ್ ಸಾಧುನವರರವರು ಮುಗಳಿಹಾಳ ಗ್ರಾಮಕ್ಕೆ ಆಗಮಿಸಿದ್ದರು.

ಪ್ರಚಾರಸಭೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದ ಚೋಪ್ರಾವರ ಅನುಪಸ್ಥಿತಿ ಎದ್ದು ಕಾಣುತಿತ್ತು.

ಇದರಿಂದಾಗಿ ಅವರ ಅಭಿಮಾನಿಗಳು ನೇರವಾಗಿ ಪಕ್ಷದ ನಾಯಕರು ಮತ್ತು ಅಭ್ಯರ್ಥಿ ಮೇಲೆ ಅಸಮಾಧಾನ ಹೊರಹಾಕಿದರು.ಆನಂದ ಚೋಪ್ರಾರವರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ.ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದು ಆಕ್ರೋಶ ಹೊರಹಾಕಿದರು.

Home add -Advt

ಇದರಿಂದ ವಿಚಲಿತರಾದ ವಿ.ಎಸ್ ಸಾಧುನವರ ಮುಂದಿನ ದಿನಗಳಲ್ಲಿ ಅವರೂ ಪ್ರಚಾರಕ್ಕೆ ಬರುವರೆಂದು ಚೋಪ್ರಾ ಬೆಂಬಲಿಗರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು.ಸಭೆಯಲ್ಲಿ ವಿಶ್ವಾಸ ವೈದ್ಯ,ರವೀಂದ್ರ ಯಲಿಗಾರ,ಭೀಮಶೆಪ್ಪಾ ಅರಭಾಂವಿ ಸಂತೋಷ ಹಾದಿಮನಿ, ವೀರನಗೌಡ ಪಾಟೀಲ, ರಾಜು ದಳವಾಯಿ, ಸಂಜು ದಳವಾಯಿ ಸೇರಿದಂತೆ ಅನೇಕ ಚೋಪ್ರಾ ಬೆಂಬಲಿಗರು ಉಪಸ್ಥಿತರಿದ್ದರು.

Related Articles

Back to top button