Latest

ಬಿಜೆಪಿ ರಾಜ್ಯ ವಕ್ತಾರರಾಗಿ ಪ್ರಮೋದ ಹೆಗಡೆ, ಜಿರಲಿ ನೇಮಕ

 

     ಪ್ರಗತಿವಾಹಿನಿ  ಸುದ್ದಿ, ಬೆಳಗಾವಿ

ಭಾರತೀಯ ಜನತಾ ಪಾರ್ಟಿಯ ರಾಜ್ಯ ವಕ್ತಾರರನ್ನಾಗಿ ಯಲ್ಲಾಪುರದ ಪ್ರಮೋದ ಹೆಗಡೆ ಹಾಗೂ ಬೆಳಗಾವಿಯ ಎಂ.ಬಿ.ಜಿರಲಿ ಅವರನ್ನು ನೇಮಕ ಮಾಡಲಾಗಿದೆ.

Home add -Advt

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ನೇಮಕ ಮಾಡಿದ್ದು, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಅವರಿಗೆ ಹಿಂದುಳಿದ ವರ್ಗಗಳ ಜವಾಬ್ದಾರಿ ನೀಡಲಾಗಿದೆ. 

ಪ್ರಮೋದ ಹೆಗಡೆ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾಗಿದ್ದು, ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ ಬೆಳೆದವರು. ಎಂ.ಬಿ.ಜಿರಲಿ ಹಿರಿಯ ವಕೀಲರಾಗಿದ್ದು, ಮಹದಾಯಿ ಯೋಜನೆಯ ರಾಜ್ಯ ಕಾನೂನು ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಹೈಕೋರ್ಟ ಹಾಗೂ ಸುಪ್ರಿಂ ಕೋರ್ಟ್ ಗಳಲ್ಲಿ ವಕಾಲತ್ತು ನಡೆಸಿ ಅನುಭವ ಹೊಂದಿದ್ದಾರೆ.

Related Articles

Back to top button