Latest

ಸಿವಿಲ್ ಎಂಜಿನಿಯರುಗಳಿಗೆ ವಾಸ್ತವಿಕ ಪರಿಕಲ್ಪನೆ ಅಗತ್ಯ

ಚಿಕ್ಕೋಡಿ : ಎಕ್ಸಟೆನ್ಸಿವ್ ಸರ್ವೆ ಕ್ಯಾಂಪ್ ಸಮಾರೋಪ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
 ಸ್ಥಳೀಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ೬ನೇ ಸೆಮಿಸ್ಟರ್ ವಿದ್ಯಾರ್ಥಿಗಳ ೧೦ ದಿನಗಳ ಎಕ್ಸಟೆನ್ಸಿವ್ ಸರ್ವೆ ಕ್ಯಾಂಪ್‌ನ ಸಮಾರೋಪ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ, ಪ್ರತಿಯೊಬ್ಬ ಸಿವಿಲ್ ಎಂಜಿನಿಯರ ವಾಸ್ತವಿಕ ಪರಿಕಲ್ಪನೆ ಹೊಂದಿದರೆ ಮಾತ್ರ ತನ್ನ ಕಾರ್ಯವೈಖರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯ. ಯಾವುದೇ ಕಟ್ಟಡ ನಿರ್ಮಾಣಕ್ಕಿಂತ ಮುಂಚೆ ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಅತ್ಯವಶ್ಯಕ. ತಾಂತ್ರಿಕತೆಯ ಜ್ಞಾನಕ್ಕೆ ಯಾವುದೇ ಮಿತಿ ಇಲ್ಲವಾದ್ದರಿಂದ ಹೊಸತನಕ್ಕೆ ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳಬೇಕಿದೆ ಎಂದರು. 
ಕ್ಯಾಂಪ್‌ನಲ್ಲಿ ಟೋಟಲ್ ಸ್ಟೇಶನ್, ಅಟೋ ಲೆವಲ್ ಯಂತ್ರದ ಸಹಾಯದಿಂದ ಚಿಂಚಣಿ, ಹಾಲಟ್ಟಿ, ಚಿಕ್ಕೋಡಿಯಲ್ಲಿ ಸರ್ವೆ ಮಾಡಲಾಯಿತು.
ವಿದ್ಯಾರ್ಥಿಗಳಾದ ಪೂಜಾ ದೇಸಾಯಿ, ನಂದೀಶ ಮಲ್ಲಾಪೂರಮಠ, ದಿವ್ಯಾ ಅನುಭವ ಹಂಚಿಕೊಂಡರು. ಪ್ರೊ. ಪ್ರದೀಪ ಹೊದ್ಲೂರ ಸ್ವಾಗತಿಸಿದರು. ಶಿಲ್ಪಾ ವರದ, ಸಿಫಾ ಪಟ್ಟೇಕರ ನಿರೂಪಿಸಿದರು. ಪ್ರೊ. ವಿವೇಕ ಪಾಟೀಲ ವಂದಿಸಿದರು. ಪ್ರೊ. ವಿ.ಕೆ. ಪಾಟೀಲ, ಪ್ರೊ. ಸುನೀಲ ಹೆಬ್ಬಾಳೆ, ಡಾ. ರಿಜ್ವಾನಾ ಬೇಗಂ, ಅಶ್ವಿನಿ ಗವಳಿ, ಸಚಿನ ಮೆಕ್ಕಳಕಿ ಉಪಸ್ಥಿತರಿದ್ದರು.

Related Articles

Back to top button